148

ಅಹಿಲ್ಯಾ ಬಾಯಿಯವರ ಧೀರ ಧರ್ಮ ಪಥ:

ಅಹಿಲ್ಯಾ ಬಾಯಿ ಹೋಳ್ಕರ್ ಅವರು 300 ವರ್ಷಗಳ ಹಿಂದೆ, ಮೇ 31ರಂದು ಜನಿಸಿದರು. ಅವರು ಸುಮಾರು 50 ವರ್ಷಗಳ ಕಾಲ ಹೋಳ್ಕರ್ ವಂಶದ ರಾಜಮಾತೆಯಾಗಿದ್ದರು. ಅವರು ಭಾರತ ಕಂಡ ಮಹಾನ್ ರಾಣಿಗಳಲ್ಲಿ ಒಬ್ಬರು. ಈ 12 ಪ್ರಶ್ನೆಗಳ ಕ್ವಿಜ್‌ನಲ್ಲಿ, ಅಹಿಲ್ಯಾ ಬಾಯಿಯವರ  ಜೀವನ, ವಿಜಯಗಳು ಮತ್ತು  ಅವರನ್ನು ಕಂಗೆಡಿಸಿದ ದುರಂತಗಳ ಬಗ್ಗೆ ತಿಳಿದುಕೊಳ್ಳೋಣ. ಅಹಿಲ್ಯಾ ಬಾಯಿಯನ್ನು ಧೀರ ನಾಯಿಕೆಯಾಗಿ ರೂಪಿಸಿದವರಾರು? ಅವರು ಎಲ್ಲಿಂದ  ಆಳಿದರು? ಅವರನ್ನು ದಾರ್ಶನಿಕ ರಾಣಿಯೆಂದು ಯಾರು ಕರೆದರು? ಯಾವ ವಿಮಾನ ನಿಲ್ದಾಣಕ್ಕೆ ಅವರ ಹೆಸರಿದೆ? 

ಭಾಗವಹಿಸಿದವರಲ್ಲಿ ಆಯ್ಕೆಯಾದ ಐವರಿಗೆ ಡಾ. ಉದಯ್ ಕುಲಕರ್ಣಿಯವರ “ದಿ ಮರಾಠಾ ಸೆಂಚುರಿ” ಪುಸ್ತಕವನ್ನು ಬಹುಮಾನವಾಗಿ ನೀಡಲಾಗುವುದು.

ಪುಣೆಯ ಹತ್ತಿರ ಇರುವ ಯಾವ ನಗರವನ್ನು ಅಹಿಲ್ಯಾನಗರ ಎಂದು ಹೆಸರು ಬದಲಾಯಿಸಲಾಗಿದೆ? ಈಕೆ ಈ ನಗರದ ಹತ್ತಿರ ಜನಿಸಿದಳು.

ಮಹಾನ್ ಮರಾಠಾ ನಾಯಕನಾಗಿದ್ದ ಮಲ್ಹಾರರಾವ್ ಹೋಳ್ಕರ್ ಅವರು ಅಹಿಲ್ಯಾ ಬಾಯಿ ಅವರನ್ನು ರಾಜಮಾತೆಯಾಗಿ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅಹಿಲ್ಯಾ ಬಾಯಿಗೆ ಮಲ್ಹಾರರಾವ್ ಯಾವ ರೀತಿ ಸಂಬಂಧಪಟ್ಟವರು?

ಅಹಿಲ್ಯಾ ಬಾಯಿ ಎಲ್ಲಿಂದ ರಾಜ್ಯವನ್ನು ಆಳಿದರು?

ಭಾರತದಲ್ಲಿನ ಯಾವ ವಿಮಾನ ನಿಲ್ದಾಣಕ್ಕೆ ಅಹಿಲ್ಯಾ ಬಾಯಿಯವರ ಹೆಸರನ್ನು ಇಡಲಾಗಿದೆ?

ಆಕೆಯ ನಂತರ ಹೋಳ್ಕರ್ ಪರಂಪರೆಯ ಉತ್ತರಾಧಿಕಾರಿ ಆದವರು ಯಾರು?

ಅಹಿಲ್ಯಾಬಾಯಿ ಮಾಹೇಶ್ವರದಲ್ಲಿ ಈ ವಸ್ತುವಿನ ಉತ್ಪಾದನೆಗೆ ಬುನಾದಿ ಹಾಕಿದರು, ಈ ಪದಾರ್ಥಕ್ಕೆ ಮಾಹೇಶ್ವರವು ಇಂದಿಗೂ ಪ್ರಸಿದ್ಧವಾಗಿದೆ. ಅದು ಯಾವುದು?

ಅಹಿಲ್ಯಾಬಾಯಿಯವರು ಪುನರುಜ್ಜೀವನ ಮಾಡಿದ ಸುಪ್ರಸಿದ್ಧ ಜ್ಯೋತಿರ್ಲಿಂಗ ದೇವಾಲಯ ಯಾವುದು? ಇತ್ತೀಚೆಗೆ ಪುನರ್ನಿರ್ಮಿತವಾದ ಸಂಕೀರ್ಣದಲ್ಲಿ ಅಹಿಲ್ಯಾಬಾಯಿಯವರ ಮೂರ್ತಿಯನ್ನು ಅಲ್ಲಿ ಸ್ಥಾಪಿಸಲಾಗಿದೆ.

ಅಹಿಲ್ಯಾ ಬಾಯಿಯ ಮನೆತನದ ಮಹಿಳೆಯರು ವೈಧವ್ಯ ಒದಗಲು ಸತಿ ಸಹಗಮನದ ದಾರಿಯನ್ನು ಹಿಡಿದರು. ಆಕೆ ಆ ಹಾದಿಯನ್ನು ಹಿಡಿಯದಂತೆ ಅವರನ್ನು ಒಪ್ಪಿಸಿದವರಾರು?

ಅಹಿಲ್ಯಾ ಬಾಯಿ ಸ್ವತಃ ಒಬ್ಬ ವೀರಯೋಧೆಯಾಗಿದ್ದರು. ಅವರು ಅನಿರೀಕ್ಷಿತ ಹಾಗೂ ಸಂಕಟಕಾರಕ ಶತ್ರುವಿನ ವಿರುದ್ಧ ಹೋರಾಡಿದರು. ಆ ಶತ್ರು ಯಾರು?

“ಅಹಿಲ್ಯಾ ಒಬ್ಬ ದಾರ್ಶನಿಕ ರಾಣಿ ಆಗಿದ್ದರು ಮತ್ತು ಅವರ ಆಳ್ವಿಕೆ ಪರಿಪೂರ್ಣ ಶಿಸ್ತು ಮತ್ತು ಉತ್ತಮ ಆಡಳಿತಕ್ಕಾಗಿ ಹೆಸರುವಾಸಿಯಾಗಿದ್ದಿತು” ಎಂಬುದಾಗಿ ತಮ್ಮ ಪುಸ್ತಕದಲ್ಲಿ ಬರೆದ ಪ್ರಸಿದ್ಧ ಭಾರತೀಯ ನಾಯಕ ಯಾರು?

ಸನಾತನ ಧರ್ಮಕ್ಕೆ ಸಂಬಂಧಿಸಿದ ಯಾವ ಮೌಲ್ಯ ಅಥವಾ ದರ್ಶನವನ್ನು ಮರಾಠರು, ಮುಖ್ಯವಾಗಿ ಅಹಿಲ್ಯಾ ಬಾಯಿ ಪುನರುಜ್ಜೀವಿಸಿದರು?

ಅಹಿಲ್ಯಾ ಬಾಯಿ ಯಾವ ತೀರ್ಥಕ್ಷೇತ್ರಗಳ ಗುಂಪನ್ನು ಧರ್ಮಾರ್ಥ ಹಾಗೂ ಮೂಲಸೌಕರ್ಯ ಕಾಮಗಾರಿಗಳಿಗಾಗಿ ಆಯ್ಕೆಮಾಡಿದ್ದರು?

ನಿರ್ಗಮನ

How did you like this quiz?

Get quiz links

We will send you quiz links at 6 AM on festival days. Nothing else 

Opt In