ಮರಾಠರು ಮತ್ತು ಅಹಿಲ್ಯಾ ಬಾಯಿ ಹಿಂದೂ ಧರ್ಮದ, ಅದರ ಅಂಗ ಸಂಸ್ಥೆಗಳ ಹಾಗೂ ಅದರ ಸರ್ವತೋಮುಖ ಪುನರುಜ್ಜೀವನಕ್ಕೆ ಶ್ರಮಿಸಿದರು. ಅದರಲ್ಲೂ ಅಹಿಲ್ಯಾ ಬಾಯಿಯವರು ತೀರ್ಥಕ್ಷೇತ್ರಗಳ ಪುನರುಜ್ಜೀವನಕ್ಕೆ ಇತ್ತ ಕೊಡುಗೆ ಅಪಾರವಾದುದು. ಸುಮಾರು ಏಳು ಶತಮಾನಗಳ ವಿದೇಶಿಗಳ ಪಾಶವೀ ಆಕ್ರಮಣವು ಭಾರತದಲ್ಲಿನ ಅನೇಕ ತೀರ್ಥಕ್ಷೇತ್ರಗಳನ್ನು ನಾಶಮಾಡಿತ್ತು. ಅಹಿಲ್ಯಾ ಬಾಯಿ ದಾನಧರ್ಮಗಳ ಮೂಲಕ ಅನೇಕ ದೇವಸ್ಥಾನಗಳನ್ನು ಪುನರ್ನಿರ್ಮಿಸಿ, ತೀರ್ಥಕ್ಷೇತ್ರಗಳಲ್ಲಿನ ಘಟ್ಟಗಳನ್ನು ಮರು ನಿರ್ಮಾಣ ಮಾಡಿ, ಯಾತ್ರಿಕರಿಗೆ ತಂಗಲು ಧರ್ಮಶಾಲೆಗಳನ್ನು ನಿರ್ಮಿಸಿ, ಶುದ್ಧ ನೀರಿನ ಸೌಲಭ್ಯಗಳಿಗೆ ಆದ್ಯತೆ ಕೊಟ್ಟು ವ್ಯವಸ್ಥೆಗಳನ್ನು ಕಲ್ಪಿಸಿದರು.ಮಲ್ಹಾರ್ ರಾವ್ ಅವರು ಜೀವಿತವಿರುವಾಗಲೇ ಅಹಿಲ್ಯಾ ಬಾಯಿ ಅನೇಕ ತೀರ್ಥಯಾತ್ರೆಗಳನ್ನು ನಡೆಸಿದ್ದರು. ಜನರು ತೀರ್ಥಯಾತ್ರೆ ಕೈಗೊಂಡಾಗ ಅನುಭವಿಸುವ ತೊಂದರೆಗಳ ಹಾಗೂ ಖರ್ಚುಗಳ ಬಗ್ಗೆ ಅಹಿಲ್ಯಾ ಬಾಯಿಯವರಿಗೆ ಸ್ಪಷ್ಟ ಅರಿವಿದ್ದಿತು. ಆದ್ದರಿಂದಲೇ ಅವರು ತಮ್ಮ ವೈಯಕ್ತಿಕ ಸಂಪತ್ತನ್ನು ತೀರ್ಥಕ್ಷೇತ್ರಗಳ ಸುಧಾರಣೆಗಾಗಿ ವಿನಿಯೋಗಿಸುವ ನಿರ್ಧಾರ ತೆಗೆದುಕೊಂಡರು. ಭಾರತದ ಪ್ರತಿಯೊಂದು ಪ್ರಮುಖ ತೀರ್ಥಕ್ಷೇತ್ರವೂ ಅಹಿಲ್ಯಾ ಬಾಯಿಯ ಉದಾರತೆಯ ಚಿಹ್ನೆಯಾಗಿದೆ. ಕೇದಾರನಾಥ , ಬದರಿನಾಥ, ರಾಮೇಶ್ವರಂ, ಪಂಢರಾಪುರ, ಸೋಮನಾಥ ಮತ್ತು ಪುರಿಯಲ್ಲಿ ಅವರಿಂದ ನಿರ್ಮಿಸಲಾದ ಸೌಲಭ್ಯಗಳು ಇಂದಿಗೂ ಇವೆ. ಈ ಸೌಲಭ್ಯಗಳು ನಿರಂತರವಾಗಿ ಉತ್ತಮ ಸ್ಥಿತಿಯಲ್ಲಿ ಉಳಿಯಲೆಂದು ಅವರು ಶಾಶ್ವತ ಆರ್ಥಿಕ ದತ್ತಿ ವ್ಯವಸ್ಥೆಗಳನ್ನೂ ಕಲ್ಪಿಸಿದರು. ಅಹಿಲ್ಯಾ ಬಾಯಿಯವರ ದಾನಧರ್ಮದ ಬಗ್ಗೆ ಜನರಲ್ ಜಾನ್ ಮ್ಯಾಲ್ಕಮ್ ಅವರು ಹೀಗೆ ಬರೆದಿದ್ದಾರೆ: “ರಾಜಕಾರ್ಯದಿಂದ ವ್ಯಸ್ತವಲ್ಲದ ಸಮಯವನ್ನೆಲ್ಲಾ ಅವರು ಭಕ್ತಿಗೆ, ದಾನಗಳಿಗೆ ಮೀಸಲಿಟ್ಟಿದ್ದರು ಮತ್ತು ಅವರ ಧರ್ಮನಿಷ್ಠೆಯು ಲೋಕದ ಕರ್ತವ್ಯಗಳನ್ನು ನಿಭಾಯಿಸುವ ಶಕ್ತಿ ಹೊಂದಲು ಸಹಾಯಮಾಡಿತು.” ಭಾರತಕ್ಕೆ ಸ್ವಾತಂತ್ರ್ಯವು ಬಂದ ನಂತರ, ಅಹಿಲ್ಯಾ ಬಾಯಿಯವರು ತಮ್ಮ ವೈಯಕ್ತಿಕ ಸಂಪತ್ತಿನಿಂದ ನಿರ್ಮಿಸಿದ್ದ ಆಸ್ತಿ ಮತ್ತು ಸಂಸ್ಥೆಗಳ ನಿರ್ವಹಣೆಗೆ ಒಂದು ನ್ಯಾಸವನ್ನು(ಟ್ರಸ್ಟ್) ರಚಿಸಲಾಯಿತು. ಆದರೆ 2012ರಲ್ಲಿ ಇಂದೋರ್ನ ಲೋಕಸಭಾ ಸದಸ್ಯೆಯೂ ಆಗಿದ್ದ ಮಾಜಿ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು, ಈ ನ್ಯಾಸವು ಅನಧಿಕೃತವಾಗಿ ಆಸ್ತಿಗಳನ್ನು ಮಾರಾಟ ಮಾಡುತ್ತಿದೆ ಎಂದು ದೂರು ಸಲ್ಲಿಸಿದರು. ಇದರ ಫಲವಾಗಿ, ಮಧ್ಯಪ್ರದೇಶ ಸರ್ಕಾರ, ನಂತರ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಗಳು, ಈ ಆಸ್ತಿಗಳನ್ನು ಅನಧಿಕೃತ ಮಾರಾಟದಿಂದ ರಕ್ಷಿಸಲು ಕ್ರಮ ಕೈಗೊಂಡವು.
ಮರಾಠರು ಮತ್ತು ಅಹಿಲ್ಯಾ ಬಾಯಿ ಹಿಂದೂ ಧರ್ಮದ, ಅದರ ಅಂಗ ಸಂಸ್ಥೆಗಳ ಹಾಗೂ ಅದರ ಸರ್ವತೋಮುಖ ಪುನರುಜ್ಜೀವನಕ್ಕೆ ಶ್ರಮಿಸಿದರು. ಅದರಲ್ಲೂ ಅಹಿಲ್ಯಾ ಬಾಯಿಯವರು ತೀರ್ಥಕ್ಷೇತ್ರಗಳ ಪುನರುಜ್ಜೀವನಕ್ಕೆ ಇತ್ತ ಕೊಡುಗೆ ಅಪಾರವಾದುದು. ಸುಮಾರು ಏಳು ಶತಮಾನಗಳ ವಿದೇಶಿಗಳ ಪಾಶವೀ ಆಕ್ರಮಣವು ಭಾರತದಲ್ಲಿನ ಅನೇಕ ತೀರ್ಥಕ್ಷೇತ್ರಗಳನ್ನು ನಾಶಮಾಡಿತ್ತು. ಅಹಿಲ್ಯಾ ಬಾಯಿ ದಾನಧರ್ಮಗಳ ಮೂಲಕ ಅನೇಕ ದೇವಸ್ಥಾನಗಳನ್ನು ಪುನರ್ನಿರ್ಮಿಸಿ, ತೀರ್ಥಕ್ಷೇತ್ರಗಳಲ್ಲಿನ ಘಟ್ಟಗಳನ್ನು ಮರು ನಿರ್ಮಾಣ ಮಾಡಿ, ಯಾತ್ರಿಕರಿಗೆ ತಂಗಲು ಧರ್ಮಶಾಲೆಗಳನ್ನು ನಿರ್ಮಿಸಿ, ಶುದ್ಧ ನೀರಿನ ಸೌಲಭ್ಯಗಳಿಗೆ ಆದ್ಯತೆ ಕೊಟ್ಟು ವ್ಯವಸ್ಥೆಗಳನ್ನು ಕಲ್ಪಿಸಿದರು.ಮಲ್ಹಾರ್ ರಾವ್ ಅವರು ಜೀವಿತವಿರುವಾಗಲೇ ಅಹಿಲ್ಯಾ ಬಾಯಿ ಅನೇಕ ತೀರ್ಥಯಾತ್ರೆಗಳನ್ನು ನಡೆಸಿದ್ದರು. ಜನರು ತೀರ್ಥಯಾತ್ರೆ ಕೈಗೊಂಡಾಗ ಅನುಭವಿಸುವ ತೊಂದರೆಗಳ ಹಾಗೂ ಖರ್ಚುಗಳ ಬಗ್ಗೆ ಅಹಿಲ್ಯಾ ಬಾಯಿಯವರಿಗೆ ಸ್ಪಷ್ಟ ಅರಿವಿದ್ದಿತು. ಆದ್ದರಿಂದಲೇ ಅವರು ತಮ್ಮ ವೈಯಕ್ತಿಕ ಸಂಪತ್ತನ್ನು ತೀರ್ಥಕ್ಷೇತ್ರಗಳ ಸುಧಾರಣೆಗಾಗಿ ವಿನಿಯೋಗಿಸುವ ನಿರ್ಧಾರ ತೆಗೆದುಕೊಂಡರು. ಭಾರತದ ಪ್ರತಿಯೊಂದು ಪ್ರಮುಖ ತೀರ್ಥಕ್ಷೇತ್ರವೂ ಅಹಿಲ್ಯಾ ಬಾಯಿಯ ಉದಾರತೆಯ ಚಿಹ್ನೆಯಾಗಿದೆ. ಕೇದಾರನಾಥ , ಬದರಿನಾಥ, ರಾಮೇಶ್ವರಂ, ಪಂಢರಾಪುರ, ಸೋಮನಾಥ ಮತ್ತು ಪುರಿಯಲ್ಲಿ ಅವರಿಂದ ನಿರ್ಮಿಸಲಾದ ಸೌಲಭ್ಯಗಳು ಇಂದಿಗೂ ಇವೆ. ಈ ಸೌಲಭ್ಯಗಳು ನಿರಂತರವಾಗಿ ಉತ್ತಮ ಸ್ಥಿತಿಯಲ್ಲಿ ಉಳಿಯಲೆಂದು ಅವರು ಶಾಶ್ವತ ಆರ್ಥಿಕ ದತ್ತಿ ವ್ಯವಸ್ಥೆಗಳನ್ನೂ ಕಲ್ಪಿಸಿದರು. ಅಹಿಲ್ಯಾ ಬಾಯಿಯವರ ದಾನಧರ್ಮದ ಬಗ್ಗೆ ಜನರಲ್ ಜಾನ್ ಮ್ಯಾಲ್ಕಮ್ ಅವರು ಹೀಗೆ ಬರೆದಿದ್ದಾರೆ: “ರಾಜಕಾರ್ಯದಿಂದ ವ್ಯಸ್ತವಲ್ಲದ ಸಮಯವನ್ನೆಲ್ಲಾ ಅವರು ಭಕ್ತಿಗೆ, ದಾನಗಳಿಗೆ ಮೀಸಲಿಟ್ಟಿದ್ದರು ಮತ್ತು ಅವರ ಧರ್ಮನಿಷ್ಠೆಯು ಲೋಕದ ಕರ್ತವ್ಯಗಳನ್ನು ನಿಭಾಯಿಸುವ ಶಕ್ತಿ ಹೊಂದಲು ಸಹಾಯಮಾಡಿತು.” ಭಾರತಕ್ಕೆ ಸ್ವಾತಂತ್ರ್ಯವು ಬಂದ ನಂತರ, ಅಹಿಲ್ಯಾ ಬಾಯಿಯವರು ತಮ್ಮ ವೈಯಕ್ತಿಕ ಸಂಪತ್ತಿನಿಂದ ನಿರ್ಮಿಸಿದ್ದ ಆಸ್ತಿ ಮತ್ತು ಸಂಸ್ಥೆಗಳ ನಿರ್ವಹಣೆಗೆ ಒಂದು ನ್ಯಾಸವನ್ನು(ಟ್ರಸ್ಟ್) ರಚಿಸಲಾಯಿತು. ಆದರೆ 2012ರಲ್ಲಿ ಇಂದೋರ್ನ ಲೋಕಸಭಾ ಸದಸ್ಯೆಯೂ ಆಗಿದ್ದ ಮಾಜಿ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು, ಈ ನ್ಯಾಸವು ಅನಧಿಕೃತವಾಗಿ ಆಸ್ತಿಗಳನ್ನು ಮಾರಾಟ ಮಾಡುತ್ತಿದೆ ಎಂದು ದೂರು ಸಲ್ಲಿಸಿದರು. ಇದರ ಫಲವಾಗಿ, ಮಧ್ಯಪ್ರದೇಶ ಸರ್ಕಾರ, ನಂತರ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಗಳು, ಈ ಆಸ್ತಿಗಳನ್ನು ಅನಧಿಕೃತ ಮಾರಾಟದಿಂದ ರಕ್ಷಿಸಲು ಕ್ರಮ ಕೈಗೊಂಡವು.