ಪೋರ್ಚುಗೀಸರು ಹಿಂದೂ ವಿಗ್ರಹಗಳನ್ನು ಒಡೆದು ಹಾಕುತ್ತಿದ್ದರು.ಇದರಿಂದ ಪಾರಾಗಲು, ಭಗವತಿ ದೇವಿಯ ವಿಗ್ರಹವನ್ನು ೧೬೭೩ರಲ್ಲಿ ಮಾರ್ಸೆಲ್ ಗೆ ತರಲಾಗಿತ್ತು. ಇಂದಿಗೂ ನಡೆಯುವ ತಿಸ್ವಾಡಿಯ ಯಾತ್ರೆ ಇದನ್ನು ಸ್ಮರಿಸುತ್ತದೆ.ಹಿಂದೂಗಳೇ ಗೋವೆಯನ್ನು ಆಕ್ರಮಿಸಲು ಪೋರ್ಚುಗೀಸರಿಗೆ ನೆರವಾಗಿದ್ದರು. ಮೊದಲಿಗೆ ಹಿಂದೂಗಳನ್ನು ಚೆನ್ನಾಗಿ ನಡೆಸಿಕೊಂಡು, ೧೫೪೦ರಿಂದ,ಹಲವಾರು ರೀತಿಯ ತಾರತಮ್ಯವನ್ನು ಹಿಂದೂಗಳ ಮೇಲೆ ಪೋರ್ಚುಗೀಸರು ಎಸಗಲು ಶುರುಮಾಡಿದರು. ಪಿಯರ್ಸನ್ ಅವರು ಹೇಳುವುದೇನೆಂದರೆ, ೧೫೪೦ರಿಂದ ಮೊದಲ್ಗೊಂಡು ಪೋರ್ಚುಗೀಸರು ಹಳೆಯ ಗೋವಾದ, ಬಾರ್ಡೀಸ್ ಮತ್ತು ಸಲ್ಸಟ್ಟಿಯ ಹಲವಾರು ಗುಡಿಗಳನ್ನು ಒಡೆದರು.
ಹಿಂದೂಗಳು ಮದುವೆ ಹಾಗೂ ಅಪಾರ ಕರ್ಮಗಳನ್ನು ನಡೆಸುವಂತಿಲ್ಲ ಎಂಬ ಠರಾವನ್ನು ಹಾಕಿದರು. ಇದರಿಂದ ಬೇಸತ್ತ ಬ್ರಾಹ್ಮಣರು ಅವರ ದೇವತಾ ವಿಗ್ರಹಗಳನ್ನು ತೆಗೆದುಕೊಂಡು ಪೋರ್ಚುಗೀಸರ ಆಡಳಿತದ ಸೀಮೆಯಿಂದ ಸ್ವಲ್ಪ ಹೊರಗೆಬಂದು ನೆಲೆಸಿದರು. ಹೀಗಾಗಿ ಇಂದಿಗೂ, ಗೋವೆಯ ಪೊಂಡಾದಲ್ಲಿ ಹಲವಾರು ಪ್ರಸಿದ್ಧ ದೇವಾಲಯಗಳನ್ನು ನೋಡಬಹುದು. ಪೊಂಡಾ ಮುಂದೆ ೧೮ನೇ ಶತಮಾನದಲ್ಲಿ ಪೋರ್ಚುಗೀಸರ ಆಡಳಿತಕ್ಕೆ ಬಂದಿತು. ಆದರೆ ಅವರು ೧೮ನೇ ಶತಮಾನದಲ್ಲಿ ಸ್ವಲ್ಪ ಸಹಿಷ್ಣುತೆಯನ್ನು ಮೈಗೂಡಿಸಿಕೊಂಡಿದ್ದರಿಂದ, ಯಾವುದನ್ನೂ ಮತ್ತೆ ಹಾಳು ಮಾಡಲಿಲ್ಲ.
ಜೋವಾ ಸಾಲ್ಧನ್ಹ ಎಂಬ ವೈಸರಾಯನು ೧೭೨೯ರಲ್ಲಿ ,ಗೋವೆಯು ಹಾನಿಯಾದದ್ದು ವ್ಯಾಪಾರದ ಕುಸಿತದಿಂದ ಮತ್ತು ಇದಕ್ಕೆ ಕಾರಣ, ಹಿಂದೂ ಮುಸ್ಲೀಮರು, ಪವಿತ್ರ ಇಗರ್ಜೀಯನ್ನು ಅಪನಂಬಿಕೆಯಿಂದ ನೋಡುತ್ತಿದ್ದರಿಂದ ಎಂದು ನುಡಿದಿದ್ದನು.
ಮೇಲಿನ ಚಿತ್ರ ಮಾರ್ಸೆಲ್ನಲ್ಲಿರುವ ಶ್ರೀ ಭಗವತೀ ಹಲ್ದೋನ್ಕಾರಿನ್ ದೇವಾಲಯದ್ದು.
ಚಿತ್ರ ಮೂಲ: ದೇವಾಲಯದ ವೆಬ್ಸೈಟ್.
ಪೋರ್ಚುಗೀಸರು ಹಿಂದೂ ವಿಗ್ರಹಗಳನ್ನು ಒಡೆದು ಹಾಕುತ್ತಿದ್ದರು.ಇದರಿಂದ ಪಾರಾಗಲು, ಭಗವತಿ ದೇವಿಯ ವಿಗ್ರಹವನ್ನು ೧೬೭೩ರಲ್ಲಿ ಮಾರ್ಸೆಲ್ ಗೆ ತರಲಾಗಿತ್ತು. ಇಂದಿಗೂ ನಡೆಯುವ ತಿಸ್ವಾಡಿಯ ಯಾತ್ರೆ ಇದನ್ನು ಸ್ಮರಿಸುತ್ತದೆ.ಹಿಂದೂಗಳೇ ಗೋವೆಯನ್ನು ಆಕ್ರಮಿಸಲು ಪೋರ್ಚುಗೀಸರಿಗೆ ನೆರವಾಗಿದ್ದರು. ಮೊದಲಿಗೆ ಹಿಂದೂಗಳನ್ನು ಚೆನ್ನಾಗಿ ನಡೆಸಿಕೊಂಡು, ೧೫೪೦ರಿಂದ,ಹಲವಾರು ರೀತಿಯ ತಾರತಮ್ಯವನ್ನು ಹಿಂದೂಗಳ ಮೇಲೆ ಪೋರ್ಚುಗೀಸರು ಎಸಗಲು ಶುರುಮಾಡಿದರು. ಪಿಯರ್ಸನ್ ಅವರು ಹೇಳುವುದೇನೆಂದರೆ, ೧೫೪೦ರಿಂದ ಮೊದಲ್ಗೊಂಡು ಪೋರ್ಚುಗೀಸರು ಹಳೆಯ ಗೋವಾದ, ಬಾರ್ಡೀಸ್ ಮತ್ತು ಸಲ್ಸಟ್ಟಿಯ ಹಲವಾರು ಗುಡಿಗಳನ್ನು ಒಡೆದರು.
ಹಿಂದೂಗಳು ಮದುವೆ ಹಾಗೂ ಅಪಾರ ಕರ್ಮಗಳನ್ನು ನಡೆಸುವಂತಿಲ್ಲ ಎಂಬ ಠರಾವನ್ನು ಹಾಕಿದರು. ಇದರಿಂದ ಬೇಸತ್ತ ಬ್ರಾಹ್ಮಣರು ಅವರ ದೇವತಾ ವಿಗ್ರಹಗಳನ್ನು ತೆಗೆದುಕೊಂಡು ಪೋರ್ಚುಗೀಸರ ಆಡಳಿತದ ಸೀಮೆಯಿಂದ ಸ್ವಲ್ಪ ಹೊರಗೆಬಂದು ನೆಲೆಸಿದರು. ಹೀಗಾಗಿ ಇಂದಿಗೂ, ಗೋವೆಯ ಪೊಂಡಾದಲ್ಲಿ ಹಲವಾರು ಪ್ರಸಿದ್ಧ ದೇವಾಲಯಗಳನ್ನು ನೋಡಬಹುದು. ಪೊಂಡಾ ಮುಂದೆ ೧೮ನೇ ಶತಮಾನದಲ್ಲಿ ಪೋರ್ಚುಗೀಸರ ಆಡಳಿತಕ್ಕೆ ಬಂದಿತು. ಆದರೆ ಅವರು ೧೮ನೇ ಶತಮಾನದಲ್ಲಿ ಸ್ವಲ್ಪ ಸಹಿಷ್ಣುತೆಯನ್ನು ಮೈಗೂಡಿಸಿಕೊಂಡಿದ್ದರಿಂದ, ಯಾವುದನ್ನೂ ಮತ್ತೆ ಹಾಳು ಮಾಡಲಿಲ್ಲ.
ಜೋವಾ ಸಾಲ್ಧನ್ಹ ಎಂಬ ವೈಸರಾಯನು ೧೭೨೯ರಲ್ಲಿ ,ಗೋವೆಯು ಹಾನಿಯಾದದ್ದು ವ್ಯಾಪಾರದ ಕುಸಿತದಿಂದ ಮತ್ತು ಇದಕ್ಕೆ ಕಾರಣ, ಹಿಂದೂ ಮುಸ್ಲೀಮರು, ಪವಿತ್ರ ಇಗರ್ಜೀಯನ್ನು ಅಪನಂಬಿಕೆಯಿಂದ ನೋಡುತ್ತಿದ್ದರಿಂದ ಎಂದು ನುಡಿದಿದ್ದನು.
ಮೇಲಿನ ಚಿತ್ರ ಮಾರ್ಸೆಲ್ನಲ್ಲಿರುವ ಶ್ರೀ ಭಗವತೀ ಹಲ್ದೋನ್ಕಾರಿನ್ ದೇವಾಲಯದ್ದು.
ಚಿತ್ರ ಮೂಲ: ದೇವಾಲಯದ ವೆಬ್ಸೈಟ್.