17

ಮಳೆಗಾಲದ ರಸಪ್ರಶ್ನೆ

ಇಂದು ಮಳೆಗಾಲವಾದರು, ಮಳೆಯು ಸ್ವಲ್ಪ ಕಡಿಮೆಯೇ ಆಗಿದೆ.ವೇದಗಳಲ್ಲಿ ಇಂದ್ರನು ಮಳೆಯನ್ನು ತಂದರೆ, ವರುಣನು ನೀರಿನ ಮೂಲಗಳಿಗೆ ಒಡೆಯ.ಇಂದ್ರನು ಇಂದಿಗೂ ಪ್ರಚಲಿತನಾಗಿರುವನು ಆದರೆ ವರುಣನು ಜನಮಾನಸದ ಜ್ಞಾಪಕದಿಂದ ಜಾರಿ ಹೋಗಿದ್ದಾನೆ. ವರುಣನ ಲಕ್ಷ್ಯ – ಲಕ್ಷಣಗಳು ವೇದಗಳಿಂದ ಹಿಡಿದು ಇತಿಹಾಸ,ಪುರಾಣ,ದರ್ಶನಗಳು ಕೊಂಡಾಡಿವೆ.ಗೌತಮ ಮುನಿಗಳನ್ನು, ಹರಿಶ್ಚಂದ್ರನನ್ನು, ಮಂತ್ರಾದ್ರಷ್ಟನಾಗಿಸಿ ಶುನಃಶೇಪನನ್ನು, ಅಂತೆಯೇ ಹಲವರನ್ನು ಕರುಣೆಯಿಂದ ಪೊರೆದ ವರುಣ ದೇವನ ಬಗ್ಗೆ ಈ ರಸಪ್ರಶ್ನೆಯ ಮೂಲಕ ತಿಳಿದುಕೊಳ್ಳೋಣ.
ನಮ್ಮ ಮುಖ್ಯ ಆಕರ ಡಾ.ಉಷಾ ಚೌಹಾಣ್ ಅವರ ಪಿ.ಎಚ್.ಡಿ ವಿಷಯ – ಭಾರತೀಯ ಕಲ್ಪನೆಯಲ್ಲಿ ವರುಣ ದೇವ ಎಂಬ ಲೇಖನ.ಇದನ್ನು ದೆಹಲಿ ವಿಶ್ವವಿದ್ಯಾಲಯ ಪ್ರಕಟಿಸಿದೆ.

೧. ವರುಣ ಎಂದರೆ “ ಆವರಿಸುವವನು” ಎಂದು ಅರ್ಥ ಬರುತ್ತದೆ.ಈ ಆವರಿಸುವಿಕೆಯು ಯಾವ ವೇದಾಂತ ತತ್ವವನ್ನು ಬಿಂಬಿಸುತ್ತದೆ?

೨. ಇಂದ್ರ – ವರುಣರ ಜೋಡಿ ಸಾಂಖ್ಯ ಶಾಖೆಯಲ್ಲೂ ಕಂಡುಬರುತ್ತದೆ. ಈ ಯುಗಳ ದೇವತೆಗಳು ಯಾವುದನ್ನು ಸಮೀಕರಿಸುತ್ತಾರೆ?

೩. ಪ್ರಕೃತಿಯ ಮೂಲ ಲಯವನ್ನು ಋತ ಎನ್ನುತ್ತಾರೆ. ಈ ಋತುವನ್ನು ಎತ್ತಿ ಹಿಡಿಯುವವನು ವರುಣ ದೇವ. ಋತದಂತೆ ತೋರುವ ಮತ್ತೊಂದು ತತ್ವಯಾವುದು?

೪. ಯಾವಾಗ ಇಬ್ಬರು ವ್ಯಕ್ತಿಗಳು ಸೇರಿ ಮಸಲತ್ತು ಮಾಡಲು ಹೊಂಚುಹಾಕಿ, ತಮ್ಮಿಬರಿಗೇ ತಿಳಿದಿದೆ ಎಂದು ಭಾವಿಸುತ್ತಾರೋ, ವರುಣ ರಾಯನು ಮೂರನೇಯವನಾಗಿ ಅವರ ಎಲ್ಲ ಕರ್ಮಗಳನ್ನು ವೀಕ್ಷಿಸಿದ್ದಾನೆ ಎಂದು ತಿಳಿಯಬೇಕು. ಈ ಉಕ್ತಿಯು ಯಾವ ವೇದದಲ್ಲಿ ಕಾಣಸಿಗುತ್ತದೆ?

೫. ವರುಣನು ಒಂದು ಪ್ರಸಿದ್ಧ ವ್ಯಾಖ್ಯಾನವನ್ನು ಭೃಗು ಮಹರ್ಷಿಗಳಿಗೆ ವಿವರಿಸುತ್ತಾನೆ. ಈ ತತ್ವವು ಯಾವುದು?

೬. ವಿಷ್ಣುವಿನ ಯಾವ ಹೆಸರು ಜಲರಾಶಿಗೆ ಒಡೆಯನಾದ ವರುಣನಂತೇ ಅರ್ಥೈಸುತ್ತದೆ?

೭. ಭಗವದ್ಗೀತೆಯಲ್ಲಿ ಕೃಷ್ಣನು ನಾಗಗಳಲ್ಲಿ ತಾನು ಅನಂತನೆಂದೂ, ನಿಯಂತ್ರಣಕಾರಕರಲ್ಲಿ ಯಮನೆಂದೂ, ಮತ್ತೊಂದು ವರ್ಗದಲ್ಲಿ ವರುಣನೆಂದೂ ಹೇಳಿಕೊಂಡಿದ್ದಾನೆ. ಈ ವರ್ಗವು ಯಾವುದು?

೮.ಆಯುರ್ವೇದದ ಪ್ರಕಾರ ವರುಣ ಎಂಬ ಸಸಿಯು ಯಾವ ರೋಗಕ್ಕೆ ಮೂಲಿಕೆಯಾಗಿಹುದು?

೦೯.ಅರ್ಜುನನಿಗೆ ವರುಣನು ನೀಡಿದ ದಿವ್ಯ ಬಿಲ್ಲು/ ಧನುಸ್ಸಿನ ಹೆಸರೇನು?

೧೦.ಹಿಂದು ಸಿಂಧಿಗಳ ಯಾವ ದೇವತೆ ವರುಣನ ರೂಪ ಎಂದು ನಂಬಲಾಗಿದೆ?

೧೧. ಯಹೂದಿಗಳ ಯಾವ ಪರಮ ದೈವವು ವರುಣನ ಗುಣ- ಲಕ್ಷಣಗಳನ್ನು ಹೊಂದಿದ್ದಾನೆ?

೧೨. ಇಂದ್ರ ಮತ್ತು ವರುಣನ ಜೊತೆಗೆ ಈ ದೇವತೆಯನ್ನು ಋಗ್ ವೇದವು ಹೆಸರಿಸುತ್ತದೆ. ಈ ದೇವನು ಪುರಾತನ ರೋಮ್ ದೇಶದಲ್ಲೂ ಪೊಜೆಗೊಳ್ಳುತ್ತಿದ್ದನು. ಈತನು ಯಾರು?

ವಿದ್ವಾಂಸರು ವೇದ, ಉಪನಿಷತ್ತು ಮತ್ತು ಇತಿಹಾಸ -ಪುರಾಣಗಳಲ್ಲನ ಸಂಪ್ರದಾಯಗಳಲ್ಲಿನ ವ್ಯತ್ಯಾಸಗಳನ್ನು ತಿಳಿಸಿದ್ದಾರೆ.ಆದರೆ ವರುಣ ದೇವನ ಕಥೆಗಳನ್ನು ನೋಡಿದಾಗ, ಜ್ಞಾನ ಕಾಂಡದ ತತ್ವಗಳೂ ಮತ್ತು ಕರ್ಮಕಾಂಡದ ಆಚರಣೆಗಳೂ ಒಂದನ್ನೊಂದು ಅವಲಂಬಿಸಿವೆ ಹೊರತು ವಿಭಿನ್ನ ಬೆಳವಣಿಗೆಗಳಲ್ಲ ಎಂದು ತಿಳಿದುಬರುತ್ತದೆ. ನೀರು ಹೇಗೆ ಮಂಜಾಗಿ,ಆವಿಯಾಗಿ, ಮಳೆಯಾಗಿ, ತೊರೆಯಾಗಿ,ಕಡಲಾಗಿ,ಸಮಸ್ತ ಜೀವರಾಶಿಗಳ ರಸವಾಗುತ್ತದೆಯೋ ಅಂತೆಯೇ ನೀರಿನ ಅಧಿಪತಿಯಾದ ವರುಣ ದೇವನು ಹಲವಾರು ರೂಪಗಳಲ್ಲಿ ಕಾಣಿಸಿಕೊಂಡಿದ್ದಾನೆ.ಅವನ ಕುರಿತಾದ ವಿವಿಧ ಆಚರಣೆಗಳು ರೂಪಾಂತರಗೊಂಡಿದ್ದರು ಇಂದಿಗೂ ಉಳಿದುಬಂದಿವೆ. ಅಲ್ಲದೆ ಇಂದು ಮರೆತು ಹೋಗಿರುವ ಮಿತ್ರ-ವರುಣರ ಜೋಡಿ ಒಂದಾನೊಂದು ಕಾಲದಲ್ಲಿ ಭೂಮಂಡಲದ ಮುಖ್ಯ ನಾಗರೀಕತೆಗಳನ್ನು ಪ್ರಭಾವಿಸಿದ್ದಿತು.
ವರುಣನು ನಮ್ಮ ನೌಕಾ ಪಡೆಯನ್ನು ಅಜೇಯವಾಗಿರಿಸಲು ಆಶೀರ್ವದಿಸಲಿ ಎಂದು ಪ್ರಾರ್ಥಿಸಿ ರಸಪ್ರಶ್ನೆಯನ್ನು ಮುಗಿಸೋಣ.

ನಿರ್ಗಮನ

How did you like this quiz?

Get quiz links

We will send you quiz links at 6 AM on festival days. Nothing else 

Opt In