ದ್ವೈತ ಮತ ಪ್ರವರ್ತಕರಾದ ಮಧ್ವಾಚಾರ್ಯರು ಕರ್ನಾಟಕದ ಉಡುಪಿಗೆ ಸೇರಿದವರು. ವಾರ್ಕರಿ ಎಂದರೆ ಪಂಢರಾಪುರಕ್ಕೆ ವಿಠೋಬ ಅಥವಾ ವಿಠ್ಠಲನ ದರ್ಶನಕ್ಕಾಗಿ ಯಾತ್ರೆ ಮಾಡಲು ಕನಸು ಕಾಣುವ ಯಾತ್ರಿಕ ಎಂದು. ಇಲ್ಲಿ ವಿಠ್ಠಲನು ತನ್ನ ಭಕ್ತರ ದರ್ಶನಕ್ಕೆ ತಾಳ್ಮೆಯಿಂದ ಕಾಯುತ್ತಿರುತ್ತಾನೆ. ವಾರ್ಕರಿ ಪರಂಪರೆ ಸಂತ ಜ್ಞಾನದೇವನಿಂದ ( ಸಾ. ಶ 1275–96) ಆರಂಭವಾಯಿತು. ಅವರು ಮರಾಠಿ ಭಾಷೆಯಲ್ಲಿ ಪ್ರಸಿದ್ಧ ಭಗವದ್ಗೀತೆಯ ಭಾಷ್ಯವಾದ ‘ಜ್ಞಾನೇಶ್ವರಿ’ಯನ್ನು ರಚಿಸಿದರು. ಸಂತ ಜ್ಞಾನದೇವನು ಸಾಮಾಜಿಕವಾಗಿ ಕೆಳಸ್ತರದ ಕುಟುಂಬದಿಂದ ಬಂದಿದ್ದು, ಸಮಾಜದಿಂದ ಬಹಿಷ್ಕೃತನಾಗಿದ್ದನು. ಅವನ ನಂತರ,13ನೇ ಶತಮಾನದಿಂದ 18ನೇ ಶತಮಾನವರೆಗೆ ಬಹುಮಾನ್ಯರಾದ ವಾರ್ಕರಿ ಸಂತರು ಬೆಳಕಿಗೆ ಬಂದರು. ಮುಕ್ತಾಬಾಯಿ, ನಾಮದೇವ, ಜನಾಬಾಯಿ, ಏಕನಾಥ ಮತ್ತು ತುಕಾರಾಮ್ ರಂತಹವರನ್ನು ನೆನೆಯಬಹುದು. ಸಂತ ಜ್ಞಾನದೇವನಂತೆ ಇವರೂ ಸಹ ಸಾಮಾಜಿಕ ಸುಧಾರಕರು, ಸಾಹಿತ್ಯ ಕ್ಷೇತ್ರದ ದಿಗ್ಗಜರು ಮತ್ತು ಆಧ್ಯಾತ್ಮಿಕ ಪಥದ ಮುಂದಾಳುಗಳಾಗಿದ್ದರು. ಈ ಸಂತರ ಗುಂಪು ಮಹಿಳೆಯರು ಹಾಗೂ ಕೆಳ ಜಾತಿಯವರನ್ನೂ ಒಳಗೊಂಡಿತ್ತು. ಈ ಸಂತರುಗಳು ಎಲ್ಲರನ್ನೂ ಏಕೀಭಾವದಿಂದ ಸೇವಿಸುತ್ತಿದ್ದರು. ಮರಾಠಿ ಭಾಷೆಯಲ್ಲಿ ಅಭಿವ್ಯಕ್ತಿಸುತ್ತಿದ್ದ ಇವರ ವೈಯಕ್ತಿಕ ಭಕ್ತಿಯು ಉತ್ಕಟವಾಗಿದ್ದು, ತೀವ್ರವಾದ ತತ್ವಚಿಂತನೆಯಿಂದ ಕೂಡಿರುತ್ತಿತ್ತು. ಜನಾಬಾಯಿ ರಚಿಸಿದ ಒಂದು ಪ್ರಸಿದ್ಧ ಪದ್ಯದ ಹೂರಣ ಹೀಗಿದೆ.
“ನಾನು ದೇವರನ್ನು ತಿನ್ನುತ್ತೇನೆ, ದೇವರನ್ನು ಕುಡಿಯುತ್ತೇನೆ, ದೇವರ ಮೇಲೆ ನಿದ್ರಿಸುತ್ತೇನೆ. ನಾನು ದೇವರನ್ನು ಖರೀದಿಸುತ್ತೇನೆ, ಎಣಿಸುತ್ತೇನೆ, ವ್ಯವಹರಿಸುತ್ತೇನೆ. ಏನೂ ಇಲ್ಲದ ಎಡೆಯೂ ಸಹ ದೇವರಿಂದ ರಿಕ್ತವಾಗಿಲ್ಲ”.
ಚಿತ್ರ ಸಹಕಾರ: ಇದು ಶ್ರೀ ಉದಯ್ ಕುಮಾರ್ ಪಿ.ಆರ್, ವಿಕಿಮೀಡಿಯಾ, ಪಾಂಡರಪುರಕ್ಕೆ ಆಗಮಿಸುವ ವಾರ್ಷಿಕ ವಾರಿ ಯಾತ್ರೆಯ ವಾರ್ಕರಿಗಳ ದೃಶ್ಯ.
ದ್ವೈತ ಮತ ಪ್ರವರ್ತಕರಾದ ಮಧ್ವಾಚಾರ್ಯರು ಕರ್ನಾಟಕದ ಉಡುಪಿಗೆ ಸೇರಿದವರು. ವಾರ್ಕರಿ ಎಂದರೆ ಪಂಢರಾಪುರಕ್ಕೆ ವಿಠೋಬ ಅಥವಾ ವಿಠ್ಠಲನ ದರ್ಶನಕ್ಕಾಗಿ ಯಾತ್ರೆ ಮಾಡಲು ಕನಸು ಕಾಣುವ ಯಾತ್ರಿಕ ಎಂದು. ಇಲ್ಲಿ ವಿಠ್ಠಲನು ತನ್ನ ಭಕ್ತರ ದರ್ಶನಕ್ಕೆ ತಾಳ್ಮೆಯಿಂದ ಕಾಯುತ್ತಿರುತ್ತಾನೆ. ವಾರ್ಕರಿ ಪರಂಪರೆ ಸಂತ ಜ್ಞಾನದೇವನಿಂದ ( ಸಾ. ಶ 1275–96) ಆರಂಭವಾಯಿತು. ಅವರು ಮರಾಠಿ ಭಾಷೆಯಲ್ಲಿ ಪ್ರಸಿದ್ಧ ಭಗವದ್ಗೀತೆಯ ಭಾಷ್ಯವಾದ ‘ಜ್ಞಾನೇಶ್ವರಿ’ಯನ್ನು ರಚಿಸಿದರು. ಸಂತ ಜ್ಞಾನದೇವನು ಸಾಮಾಜಿಕವಾಗಿ ಕೆಳಸ್ತರದ ಕುಟುಂಬದಿಂದ ಬಂದಿದ್ದು, ಸಮಾಜದಿಂದ ಬಹಿಷ್ಕೃತನಾಗಿದ್ದನು. ಅವನ ನಂತರ,13ನೇ ಶತಮಾನದಿಂದ 18ನೇ ಶತಮಾನವರೆಗೆ ಬಹುಮಾನ್ಯರಾದ ವಾರ್ಕರಿ ಸಂತರು ಬೆಳಕಿಗೆ ಬಂದರು. ಮುಕ್ತಾಬಾಯಿ, ನಾಮದೇವ, ಜನಾಬಾಯಿ, ಏಕನಾಥ ಮತ್ತು ತುಕಾರಾಮ್ ರಂತಹವರನ್ನು ನೆನೆಯಬಹುದು. ಸಂತ ಜ್ಞಾನದೇವನಂತೆ ಇವರೂ ಸಹ ಸಾಮಾಜಿಕ ಸುಧಾರಕರು, ಸಾಹಿತ್ಯ ಕ್ಷೇತ್ರದ ದಿಗ್ಗಜರು ಮತ್ತು ಆಧ್ಯಾತ್ಮಿಕ ಪಥದ ಮುಂದಾಳುಗಳಾಗಿದ್ದರು. ಈ ಸಂತರ ಗುಂಪು ಮಹಿಳೆಯರು ಹಾಗೂ ಕೆಳ ಜಾತಿಯವರನ್ನೂ ಒಳಗೊಂಡಿತ್ತು. ಈ ಸಂತರುಗಳು ಎಲ್ಲರನ್ನೂ ಏಕೀಭಾವದಿಂದ ಸೇವಿಸುತ್ತಿದ್ದರು. ಮರಾಠಿ ಭಾಷೆಯಲ್ಲಿ ಅಭಿವ್ಯಕ್ತಿಸುತ್ತಿದ್ದ ಇವರ ವೈಯಕ್ತಿಕ ಭಕ್ತಿಯು ಉತ್ಕಟವಾಗಿದ್ದು, ತೀವ್ರವಾದ ತತ್ವಚಿಂತನೆಯಿಂದ ಕೂಡಿರುತ್ತಿತ್ತು. ಜನಾಬಾಯಿ ರಚಿಸಿದ ಒಂದು ಪ್ರಸಿದ್ಧ ಪದ್ಯದ ಹೂರಣ ಹೀಗಿದೆ.
“ನಾನು ದೇವರನ್ನು ತಿನ್ನುತ್ತೇನೆ, ದೇವರನ್ನು ಕುಡಿಯುತ್ತೇನೆ, ದೇವರ ಮೇಲೆ ನಿದ್ರಿಸುತ್ತೇನೆ. ನಾನು ದೇವರನ್ನು ಖರೀದಿಸುತ್ತೇನೆ, ಎಣಿಸುತ್ತೇನೆ, ವ್ಯವಹರಿಸುತ್ತೇನೆ. ಏನೂ ಇಲ್ಲದ ಎಡೆಯೂ ಸಹ ದೇವರಿಂದ ರಿಕ್ತವಾಗಿಲ್ಲ”.
ಚಿತ್ರ ಸಹಕಾರ: ಇದು ಶ್ರೀ ಉದಯ್ ಕುಮಾರ್ ಪಿ.ಆರ್, ವಿಕಿಮೀಡಿಯಾ, ಪಾಂಡರಪುರಕ್ಕೆ ಆಗಮಿಸುವ ವಾರ್ಷಿಕ ವಾರಿ ಯಾತ್ರೆಯ ವಾರ್ಕರಿಗಳ ದೃಶ್ಯ.