99

ಭಾರತದ ಸಂತ ಕವಿಗಳು ರಸಪ್ರಶ್ನೆ

ಇಂದು ಪ್ರಸಿದ್ಧ ಭಕ್ತಿಕವಿ, ಲೋಕಪ್ರಿಯ ಸಂತ ಕಬೀರ್ ಅವರ ಜಯಂತಿ. ಭಕ್ತಿ ಎಂದರೆ ದೇವರ ಅಸ್ತಿತ್ವದಲ್ಲಿ ಅಚಲವಾದ ಭಾವಪೂರ್ಣ ವಿಶ್ವಾಸ. ಇದು ಮಾನವನಲ್ಲಿ ಅತ್ಯಂತ ಪ್ರಾಚೀನ ಕಾಲದಿಂದಲೂ ಅಂತರ್ಗತವಾಗಿದೆ. ಈಶೋಪನಿಷತ್ ಮತ್ತು ಭಗವದ್ಗೀತೆಯು ಭಕ್ತಿಯನ್ನು ಸ್ತುತಿಸುತ್ತವೆ. ಭಕ್ತಿಕಾವ್ಯವು ಬಹುಶಃ ಸಾಮಾನ್ಯ ಶಕೆ 6ನೇ ಶತಮಾನದಲ್ಲಿ ತಮಿಳು ಪ್ರದೇಶದಲ್ಲಿ ಆರಂಭವಾಗಿ, ಭಾರತದಾದ್ಯಂತ ಹರಡಿತು. ಒಂದು ಪ್ರಸಿದ್ಧ ಸಂಸ್ಕೃತ ಶ್ಲೋಕವು ಹೀಗೆ ಹೇಳುತ್ತದೆ: “ದ್ರಾವಿಡದಲ್ಲಿ ಭಕ್ತಿಯು ಜನಿಸಿದಳು, ಕರ್ನಾಟಕದಲ್ಲಿ ಆಕೆ ಪ್ರೌಢಳಾದಳು, ಮಹಾರಾಷ್ಟ್ರದಲ್ಲಿ ತಾರುಣ್ಯವನ್ನು ಪಡೆದಳು, ಗುಜರಾತಿನಲ್ಲಿ ವೃದ್ಧಾಪ್ಯವನ್ನು ಹೊಂದಿದರೂ, ವೃಂದಾವನ ತಲುಪಿದಾಗ ಮತ್ತೆ ನವಯುವತಿಯಂತೆ ಆವಿರ್ಭವಿಸಿದಳು.” ಈ 12 ಪ್ರಶ್ನೆಗಳ ರಸಪ್ರಶ್ನೆಯಲ್ಲಿ, ನಮ್ಮ ಭಕ್ತಿ ಸಂಪ್ರದಾಯದ ವಿವಿಧ ಸಂತರು ಮತ್ತು ಅವರ ಕೊಡುಗೆಗಳ ವಿಚಾರವಾಗಿ ನಾವು ತಿಳಿದುಕೊಳ್ಳೋಣ. ಆಂಡ್ರೂ ಶೆಲಿಂಗ್ ರವರು ಸಂಪಾದಿಸಿದ ಉತ್ತಮ ಭಕ್ತಿಕಾವ್ಯಗಳ ಸಂಕಲನವು ಈ ರಸಪ್ರಶ್ನೆಯ ಆಧಾರವಾಗಿದೆ. ಈ ರಸಪ್ರಶ್ನೆಯಲ್ಲಿ ಭಾಗವಹಿಸುವ ಐದು ಭಾಗ್ಯಶಾಲಿಗಳು ಬಿಬೇಕ್ ದೇಬ್ ರಾಯ್ ಅವರ “Bhagavad Gita for Millennials” ಪುಸ್ತಕವನ್ನು ಬಹುಮಾನವಾಗಿ ಪಡೆಯುತ್ತಾರೆ.

ಸಾಮಾನ್ಯ ಶಕೆ 6 ರಿಂದ 10ನೇ ಶತಮಾನಗಳ ನಡುವೆ, ತಮಿಳುನಾಡಿನಲ್ಲಿ ಉತ್ಕಟ ಭಕ್ತಿಕಾವ್ಯಗಳ ರಚನೆಯ ಮೂಲಕ ಜನರಲ್ಲಿ ಗಾಢವಾದ ಪ್ರಭಾವ ಬೀರಿದ ಶ್ರೀ ವೈಷ್ಣವ ಸಂಪ್ರದಾಯದ ಅದ್ಭುತ ಸಂತರ ಗುಂಪು ಯಾವುದು?

12 ನೇ ಶತಮಾನದ ಕಾಲದಲ್ಲಿ ವೀರಶೈವ ಪರಂಪರೆಯಲ್ಲಿ ನಡೆದುಬಂದ ಶಿವಶರಣೆ ಅಕ್ಕಮಹಾದೇವಿ. ಆಕೆ, ಜಗವು ಕಂಡ ಅಭಿಜಾತ ಭಕ್ತಿ ಕವಯಿತ್ರಿ. ಸಮಾಜದಲ್ಲಿನ ಶುಷ್ಕ ಕಂದಾಚಾರಗಳನ್ನು ವಿರೋಧಿಸಿ ಪ್ರತಿಭಟನೆಯ ಪ್ರತೀಕವಾಗಿ ವಚನ ಸಾಹಿತ್ಯವನ್ನು ರಚಿಸಿದವಳು. ಅವಳು ಯಾವ ಭಾಷೆಯಲ್ಲಿ ರಚಿಸಿದಳು?

ಲಾಲ್ ದೇಡ್ ಅಥವಾ ಲಲ್ಲ ಎಂಬ 13 ನೇ ಶತಮಾನದ ಈ ಶಿವಭಕ್ತೆಗೆ ಹಿಂದೂ ಹಾಗೂ ಮುಸಲ್ಮಾನ ಅನುಯಾಯಿಗಳಿದ್ದರು. ಆಕೆ ಎಲ್ಲಿಯವಳು?

16 ನೇ ಶತಮಾನದ ಮಧ್ಯಭಾಗದಲ್ಲಿ ತಿರುಪತಿಯ ಹತ್ತಿರದ ಶ್ರೀ ಕಾಳಹಸ್ತಿ ದೇವಾಲಯದಲ್ಲಿ ಮಹಾನ್ ಭಕ್ತಿಸಂತ ಧೂರ್ಜಟಿಯೆಂಬುವನಿದ್ದನು. ಈ ದೇವಾಲಯದ ಸ್ವಾಮಿ ಯಾರು?

ಈ ಸಂತರ ಪೈಕಿ, ಮಹಾರಾಷ್ಟ್ರದ ವಾರ್ಕರಿ ಪರಂಪರೆಗೆ ಸೇರದವರು ಯರು?

ಅಖಾ ಭಗತ್ ಅಥವಾ ಅಖೋ ಅವರು ಸಾಮಾಜಿಕ ಆಚರಣೆಗಳನ್ನು ತೀವ್ರವಾಗಿ ಖಂಡಿಸಿ ಗಂಭೀರವಾದ ಕಾವ್ಯಗಳನ್ನು ಗುಜರಾತಿ ಭಾಷೆಯಲ್ಲಿ ರಚಿಸಿದರು. ಅವರ ಆರು ಸಾಲಿನ ಕವನಗಳನ್ನು ಏನೆಂದು ಕರೆಯುತ್ತಾರೆ?

ಸಂತ ಕವಿ, ಅಂಧ ಸೂರದಾಸರು ಶ್ರೀ ಕೃಷ್ಣನ ಬಗೆಗಿನ ಮಧುರ ಕಾವ್ಯಗಳಿಗೆ ಪ್ರಸಿದ್ಧರು. ಅವರು ಉತ್ತರ ಭಾರತದ ಯಾವ ಉಪಭಾಷೆಯಲ್ಲಿ ಅವುಗಳನ್ನು ರಚಿಸಿದರು?

ದಲಿತ ಚರ್ಮಕಾರ ಸಮುದಾಯದ ಭಕ್ತಿಕವಿಯನ್ನು ಉಲ್ಲೇಖಿಸಿ ಪ್ರಧಾನಮಂತ್ರಿ ಮೋದಿಯವರು 2022ರ ಪಂಜಾಬ್ ಚುನಾವಣೆಯ ಪ್ರಚಾರದಲ್ಲಿ, “ನಾಯಕನ ಕರ್ತವ್ಯವೆಂದರೆ ತನ್ನ ಜನರಿಗೆ ಆಹಾರ ಹಾಗೂ ಸಮಾನತೆಯ ಜೀವನವನ್ನು ಭದ್ರಪಡಿಸುವುದಾಗಿದೆ” ಎಂಬುದನ್ನು ಒತ್ತಿಹೇಳಿದರು. ಅವರು ಉಲ್ಲೇಖಿಸಿದ ಕವಿ ಯಾರು?

ಆ ಮಂದಿ ದೇವರ ಅಲೆಮಾರಿಗಳು. ಬಂಗಾಳದಲ್ಲಿ ಹಳ್ಳಿ ಹಳ್ಳಿಗೆ ಸಂಚರಿಸಿ, ಧಾರ್ಮಿಕ ಆಚರಣೆಗಳು ಮತ್ತು ಜಾತಿ ವ್ಯವಸ್ಥೆಯನ್ನು ತೀವ್ರವಾಗಿ ಟೀಕಿಸುತ್ತಾ, ದೇವರನ್ನು ಹೊಗಳುತ್ತಾ, ಭಕ್ತಿಗೀತೆಗಳನ್ನು ಹಾಡುವ ಪರ್ಯಟಕ ಗಾಯಕರು. ಅವರು ಯಾರು?

ಕಬೀರ್ ದಾಸರು ಮರಣ ಹೊಂದಿದಾಗ, ಹಿಂದುಗಳು ಮತ್ತು ಮುಸ್ಲಿಮರು ಅವರ ಅಂತ್ಯಕ್ರಿಯೆಯ ವಿಚಾರವಾಗಿ ತೀವ್ರವಾದ ವಾದವಿವಾದಕ್ಕೆ ಇಳಿದರು. ಅವರು ಶವಕ್ಕೆ ಹೊದಿಸಿದ ಬಟ್ಟೆಯನ್ನು ತೆಗೆಯಲು, ಶವವು ಏನಾಗಿ ಮಾರ್ಪಟ್ಟಿದ್ದಿತು?

‘ಭಾನು ಸಿಂಹ’ ಎಂಬ ಗುಪ್ತ ನಾಮದಿಂದ ಅತ್ಯುತ್ತಮ ಭಕ್ತಿ ಸಾಹಿತ್ಯವನ್ನು ಪ್ರಪಂಚಕ್ಕೆ ನೀಡಿದ ಬಂಗಾಳದ ಆಧುನಿಕ ಸಮಾಜ ಸುಧಾರಕರಾರು?

ನಿರ್ಗಮನ

How did you like this quiz?

Get quiz links

We will send you quiz links at 6 AM on festival days. Nothing else 

Opt In