ರಕ್ಷಾಬಂಧನ ರಸಪ್ರಶ್ನೆ

ಪುರಾಣಗಳಲ್ಲಿ ಹಲವಾರು ಅಭೂತಪೂರ್ವ ಮಹಿಳೆಯರ ಕಥೆಗಳಿವೆ. ರಕ್ಷಾಬಂಧನದಂದು ಇಂತಹ ಕೆಲವು ಸ್ಪೂರ್ತಿದಾಯಕ ಕಥೆಗಳನ್ನು ತಿಳಿದುಕೊಳ್ಳೋಣ. ಇಂತಹ ಕಥೆಗಳು ನಮಗೆ ಉತ್ತಮ ನೀತಿಯನ್ನು ಹಾಗೂ ಜೀವನ ದರ್ಶನವನ್ನು ಮಾಡಿಸುತ್ತವೆ. ಎಲ್ಲರಿಗೂ ರಕ್ಷಾಬಂಧನದ ಹಾರ್ದಿಕ ಶುಭಾಶಯಗಳು.
ತುಳಸಿದಾಸ ಜಯಂತಿ ರಸಪ್ರಶ್ನೆ

ಜುಲೈ 31 ತುಳಸಿದಾಸರ ಜಯಂತಿ.
ರಾಮಚರಿತಮಾನಸ ಅಥವಾ ಪ್ರೀತಿಯಿಂದ ಮಾನಸ ಎಂದೂ ಕರೆಯಲ್ಪಡುವ ಈ ಹೊತ್ತಿಗೆ ಉತ್ತರದ ಅನೇಕರಿಗೆ ಪವಿತ್ರ ಗ್ರಂಥ.
ಮಾನಸ ಅತ್ಯಂತಭಾವ ಪೂರ್ಣ ಭಕ್ತಿಕಾವ್ಯ ಹಾಗೂ ಜಟಿಲವಾದ ಹಿಂದೂತತ್ತ್ವಶಾಸ್ತ್ರದ – ಸಾಮಾನ್ಯ ಜನರಿಗೂ ಅರ್ಥವಾಗುವಂಥ ಭಾಷೆಯಲ್ಲಿನ ಅತಿ ಸರಳ ಪ್ರಸ್ತುತಿ.
‘ತತ್ತ್ವಜ್ಞಾನಿಯಾಗಿ ತುಳಸಿ ದಾಸ’ ಮಾನಸದಲ್ಲಿ ಏನು ಹೇಳುತ್ತಾರೆಂದು ಈ ರಸಪ್ರಶ್ನೆಯಿಂದ ತಿಳಿಯಬಹುದು.
ಐದು ಅದೃಷ್ಟಶಾಲಿ ರಸಪ್ರಶ್ನೆ ವಿಜೇತರು ಈ ಪುಸ್ತಕವನ್ನು ಗೆಲ್ಲುವ ಅವಕಾಶ ಹೊಂದಿದ್ದಾರೆ.
કારગિલ દિવસ ક્વિઝ

યુદ્ધો બહાદુર લડવૈયાઓ દ્વારા જીતવામાં આવે છે. કારગિલ એ મુશ્કેલીઓ સામેની આ બહાદુરીનું એક ઉત્તમ ઉદાહરણ હતું. આજે, કારગિલ દિવસ પર, અમે તમને આ ૧૨ પ્રશ્નોના ક્વિઝમાં ભારતના પરમવીર ચક્ર પુરસ્કાર વિજેતાઓની વાર્તાઓ લાવીએ છીએ.પ્રથમ પુરસ્કાર વિજેતા કોણ હતા, સૌથી નાના કોણ હતા, જે હવામાં મૃત્યુ પામ્યા? કોણ કોઈ માટે મૃત્યુ પામ્યા નહીં અને કોણ બીજા ભૂમિ માટે મૃત્યુ પામ્યા?
ಗುರು ಪೂರ್ಣಿಮಾ ರಸಪ್ರಶ್ನೆ

ಉಪನಿಷತ್ತುಗಳು ವೇದಾಂತ – ಭಾರತೀಯ ತತ್ವಶಾಸ್ತ್ರದ ಚಿಲುಮೆ. ಪ್ರಧಾನ ಉಪನಿಷತ್ತುಗಳು 10 (ಅಥವಾ 13).
ಈ ರಸಪ್ರಶ್ನೆಯಲ್ಲಿ ನಾವು ಪ್ರಧಾನ ಉಪನಿಷತ್ತುಗಳು ವಾಸ್ತವದ ಸ್ವರೂಪವನ್ನು ಹೇಗೆ ವಿವರಿಸುತ್ತವೆ ಎಂಬುದನ್ನು ನೋಡುತ್ತೇವೆ. (‘ಬ್ರಹ್ಮ ಸತ್ಯ ಜಗತ್ ಮಿಥ್ಯ’).
ನಮ್ಮ ರಸಪ್ರಶ್ನೆಯು ಉಪನಿಷತ್ ವಿದ್ವಾಂಸರಾದ ಶ್ರೀಮತಿ ಗೀತಾ ಕುಲಕರ್ಣಿ ಅವರ ಎಂಫಿಲ್ ಪ್ರಬಂಧ ಮತ್ತು ಇತರ ಮೂಲಗಳಿಂದ ಪ್ರೇರಿತವಾಗಿದೆ. ಅವರಿಗೆ ನಮ್ಮ ಕೃತಜ್ಞತೆಗಳು.
ರಥ ಯಾತ್ರೆ ರಸಪ್ರಶ್ನೆ

ಜೂನ್ 27 ರಥಯಾತ್ರೆ.ಇದು ಯಾತ್ರೆಗಳಲ್ಲಿ ಅತ್ಯಂತ ಶ್ರೇಷ್ಠವಾದದ್ದು ಮತ್ತು ಜಗ್ಗರ್ನಾಟ್ ಎಂಬ ಇಂಗ್ಲಿಷ್ ಪದಕ್ಕೆ ಕಾರಣವಾಯಿತು. ಯಾತ್ರೆ ಎಷ್ಟು ಉದ್ದವಾಗಿದೆ? ಯಾತ್ರೆ ಎಲ್ಲಿಗೆ ಹೋಗುತ್ತದೆ? ಪುರಿಗೆ ಮರಾಠರ ಸಂಪರ್ಕವೇನು? ಈ ರಸಪ್ರಶ್ನೆಯಲ್ಲಿ ಪುರಿ ಮತ್ತು ರಥ ಯಾತ್ರೆಯ ಬಗ್ಗೆ 12 ಆಸಕ್ತಿದಾಯಕ ಸಂಗತಿಗಳನ್ನು ಅನ್ವೇಷಿಸಿ. 5 ಅದೃಷ್ಟಶಾಲಿ ವಿಜೇತರು ಬಿಬೇಕ್ ದೇಬ್ರಾಯ್ ಅವರ ಸಹಸ್ರಮಾನಗಳಿಗಾಗಿ ಭಗವದ್ಗೀತೆಯನ್ನು ಉಡುಗೊರೆಯಾಗಿ ಸ್ವೀಕರಿಸುತ್ತಾರೆ.
ಯೋಗ ದಿನಾಚರಣೆ – ರಸಪ್ರಶ್ನೆ

ಜೂನ್ ೨೧: ವಿಶ್ವ ಯೋಗ ದಿನ.
ಈ ರಸಪ್ರಶ್ನೆಯಲ್ಲಿ ನಾವು ಯೋಗದೊಂದಿಗೆ ಒಗ್ಗೂಡಿರುವ ಪ್ರಾಚೀನ ಆರೋಗ್ಯಶಾಸ್ತ್ರವಾದ ಆಯುರ್ವೇದದ ಕುರಿತು ತಿಳಿಯುತ್ತೇವೆ. “ಆಯುರ್ವೇದ” ಎನ್ನುವುದರ ಅರ್ಥವೇನು? ಆಯುರ್ವೇದದ ಪ್ರಾಚೀನ ಆಚಾರ್ಯರುಗಳು ಯಾರು? ವ್ಯಕ್ತಿಯ ಆರೋಗ್ಯವನ್ನು ನಿರ್ಧರಿಸುವ ತ್ರಿದೋಷಗಳು (ಮೂರು ದೋಷಗಳು) ಯಾವುವು?
ಕಬೀರ ಜಯಂತಿ

ಇಂದು ಪ್ರಸಿದ್ಧ ಭಕ್ತಿಕವಿ, ಲೋಕಪ್ರಿಯ ಸಂತ ಕಬೀರ್ ಅವರ ಜಯಂತಿ. ಮಾನವನಲ್ಲಿ ಭಕ್ತಿಯ ಭಾವವು ಅತ್ಯಂತ ಪ್ರಾಚೀನವಾದುದು. ಈಶೋಪನಿಷತ್ ಮತ್ತು ಭಗವದ್ಗೀತೆಯು ಭಕ್ತಿಯನ್ನು ಸ್ತುತಿಸುತ್ತವೆ. ಭಕ್ತಿಕಾವ್ಯವು ಬಹುಶಃ ಸಾ.ಶ 6ನೇ ಶತಮಾನದಲ್ಲಿ ತಮಿಳು ಪ್ರದೇಶದಲ್ಲಿ ಆರಂಭವಾಗಿ, ಭಾರತದಾದ್ಯಂತ ಹರಡಿತು. ಈ 12 ಪ್ರಶ್ನೆಗಳ ರಸಪ್ರಶ್ನೆಯಲ್ಲಿ, ನಮ್ಮ ಭಕ್ತಿ ಸಂಪ್ರದಾಯದ ವಿವಿಧ ಸಂತರು ಮತ್ತು ಅವರ ಕೊಡುಗೆಗಳ ವಿಚಾರವಾಗಿ ನಾವು ತಿಳಿದುಕೊಳ್ಳೋಣ. ಆಂಡ್ರೂ ಶೆಲಿಂಗ್ ರವರು ಸಂಪಾದಿಸಿದ ಉತ್ತಮ ಭಕ್ತಿಕಾವ್ಯಗಳ ಸಂಕಲನವು ಈ ರಸಪ್ರಶ್ನೆಯ ಆಧಾರವಾಗಿದೆ.
ಅಹಿಲ್ಯಾ ಬಾಯಿ ರಸಪ್ರಶ್ನೆ

ಅಹಿಲ್ಯಾ ಬಾಯಿಯವರ ಧೀರ ಧರ್ಮ ಪಥ:
ಅಹಿಲ್ಯಾ ಬಾಯಿ ಹೋಳ್ಕರ್ ಅವರು 300 ವರ್ಷಗಳ ಹಿಂದೆ, ಮೇ 31ರಂದು ಜನಿಸಿದರು. ಅವರು ಸುಮಾರು 50 ವರ್ಷಗಳ ಕಾಲ ಹೋಳ್ಕರ್ ವಂಶದ ರಾಜಮಾತೆಯಾಗಿದ್ದರು. ಈ 12 ಪ್ರಶ್ನೆಗಳ ಕ್ವಿಜ್ನಲ್ಲಿ, ಅಹಿಲ್ಯಾ ಬಾಯಿಯವರ ಜೀವನ, ವಿಜಯಗಳು ಮತ್ತು ಅವರನ್ನು ಕಂಗೆಡಿಸಿದ ದುರಂತಗಳ ಬಗ್ಗೆ ತಿಳಿದುಕೊಳ್ಳೋಣ.
ಭಾಗವಹಿಸಿದವರಲ್ಲಿ ಆಯ್ಕೆಯಾದ ಐವರಿಗೆ ಡಾ. ಉದಯ್ ಕುಲಕರ್ಣಿಯವರ “ದಿ ಮರಾಠಾ ಸೆಂಚುರಿ” ಪುಸ್ತಕವನ್ನು ಬಹುಮಾನವಾಗಿ ನೀಡಲಾಗುವುದು.
ಬೌದ್ಧ ಧರ್ಮದ ಸಂಕೇತಗಳು ರಸಪ್ರಶ್ನೆ

ಮೇ ೧೨ ರಂದು ವೈಶಾಖ ಶುಕ್ಲ ಪೂರ್ಣಿಮೆ. ಇದು ಬುದ್ಧ ಪೂರ್ಣಿಮೆ. ಬೌದ್ಧ ಧರ್ಮವು ಮುಖ್ಯವಾಗಿ ಹಲವು ಪವಿತ್ರ ಸಂಕೇತಗಳನ್ನು ಒಳಗೊಂಡಿದೆ. ಬೌದ್ಧ ಧರ್ಮವು ಅಸ್ತಿತ್ವಕ್ಕೆ ಬಂದಾಗ ಅದಾಗಲೇ ಶ್ರೇಷ್ಠವೆನಿಸಿದ್ದ ಹಲವು ಚಿಹ್ನೆಗಳನ್ನು, ಸಂಕೇತಗಳನ್ನು ತನ್ನ ಪ್ರಸರಣಕ್ಕೂ ಅನುವಾಗುವಂತೆ ಬಳಸಿಕೊಂಡಿತು. ತನ್ನದೇ ಆದ ಹೊಸ ಸಂಕೇತಗಳನ್ನೂ ಸೃಜಿಸಿಕೊಂಡಿತು ಕೂಡ. ಈ ರಸಪ್ರಶ್ನೆಯಲ್ಲಿ ನಾವು ೧೨ ಬೌದ್ಧ ಸಂಕೇತಗಳ ಬಗ್ಗೆ ತಿಳಿದುಕೊಳ್ಳೋಣ. ಈ ಪ್ರಶ್ನೆಗಳು ಬೌದ್ಧ ಧರ್ಮದ ದರ್ಶನ, ಸಂಕೇತ ಪ್ರಪಂಚ ಹಾಗೂ ವಾಸ್ತುಶಿಲ್ಪಗಳಿಗೆ ಸಂಬಂಧಿಸಿದೆ. ಈ ರಸಪ್ರಶ್ನೆಯ ಮೊದಲ ೫ ವಿಜೇತರಿಗೆ ಬಿಬೇಕ್ ದೇಬ್ರಾಯ್ ಅವರ “Bhagavad Gita for Millennials” ಎಂಬ ಪುಸ್ತಕವನ್ನು ಬಹುಮಾನವನ್ನಾಗಿ ಕೊಡಲಾಗುವುದು.
ಅಕ್ಷಯ ತೃತೀಯ ರಸಪ್ರಶ್ನೆ

ಅಕ್ಷಯ ತೃತೀಯ (ಅಕ್ಷಯ ತದಿಗೆ) ಪರ್ವ ದಿನವು ಹೆಚ್ಚು ಜನಪ್ರಿಯವಲ್ಲದಿದ್ದರೂ, ಬಹಳ ಮಹತ್ತರವಾದುದು ಹಾಗೂ ಶ್ರೇಷ್ಠವಾದುದು. ನಂಬಿಕೆಯ ದೃಷ್ಟಿಯಿಂದ ಅತಿ ಪುರಾತನವಾದುದೂ ಸಹ. ಈ ಹಬ್ಬವು ನಮ್ಮ ನಿತ್ಯ ಜೀವನದಲ್ಲಿ ದವಸ-ಧಾನ್ಯ, ಹೊನ್ನು, ಸಂಪತ್ತು, ದಾನ, ಉಪವಾಸಾದಿಗಳ ಮೂಲಕ ಬೆಸೆದುಕೊಂಡಿದೆ. ಈ ರಸಪ್ರಶ್ನೆಯಲ್ಲಿ ನಾವು ಆ ಸಂಬಂಧದ ಎಳೆಗಳನ್ನು ಅರಿತುಕೊಳ್ಳೋಣ. ನಿತ್ಯವೂ ಲಕ್ಷಾಂತರ ಮಕ್ಕಳಿಗೆ ಯಾರು ಭೋಜನ ವ್ಯವಸ್ಥೆಯನ್ನು ಮಾಡುತ್ತಾರೆ? ಕುಬೇರ, ಗಂಗೆ, ಶ್ರೀಗಂಧ ಹಾಗೂ ಕಬ್ಬಿನಹಾಲು – ಈ ಹಬ್ಬದಿಂದ ಜೊತೆ ಇವರ ನಂಟೇನು? ಬನ್ನಿ, ತಿಳಿದುಕೊಳ್ಳೋಣ.
