ನಾಗರಕೋಯಿಲ್ನ ನಾಗರಾಜ ದೇವಸ್ಥಾನ (ಸಾಮಾನ್ಯ ಶಕೆ 9ರಿಂದ 12ನೇ ಶತಮಾನಕ್ಕೆ ಸಂಬಂದಿಸಿದ್ದು) ಈ ನಗರದ ಹೆಸರಿಗೆ ಕಾರಣವಾಗಿದೆ. ‘ನಾಗರ್’ ಎಂದರೆ ನಾಗ, ‘ಕೋಯಿಲ್’ ಎಂದರೆ ದೇವಸ್ಥಾನ. ಈ ದೇವಸ್ಥಾನದ ಗರ್ಭಗುಡಿಯ ನೆಲವನ್ನು ವಿಶೇಷವಾಗಿ ಮರಳಿನಿಂದ ನಿರ್ಮಿಸಲಾಗಿದೆ. ಇಲ್ಲಿ ಐದು ಹೆಡೆಗಳಿರುವ ನಾಗರಾಜನ ವಿಗ್ರಹವಿದೆ. ದೇವಸ್ಥಾನದಲ್ಲಿ ಪವಿತ್ರ ಪ್ರಸಾದವಾಗಿ ಒದ್ದೆಯಾದ ಮರಳನ್ನು ನೀಡಲಾಗುತ್ತದೆ.
ದಕ್ಷಿಣ ಭಾರತದಲ್ಲಿ ನಾಗಾರಾಧನೆಯ ಪರಂಪರೆ ಇಂದಿಗೂ ಜೀವಂತವಾಗಿದೆ. ವೈದ್ಯ ಸಮುದಾಯದವರು ‘ಡಕ್ಕೆ’ ಎಂಬ ಸಣ್ಣ ವಾದ್ಯವನ್ನು ನುಡಿಸುವುದರಲ್ಲಿ ಪರಿಣತರಾಗಿದ್ದು, ನಾಗದೇವತೆ ಮತ್ತು ಹಾವುಗಳಿಗೆ ಸಂಬಂಧಿಸಿದ ಆಚರಣೆಗಳ ಬಗ್ಗೆ ವಿಶೇಷ ಜ್ಞಾನ ಹೊಂದಿದ್ದಾರೆ ಎನ್ನಲಾಗುತ್ತದೆ.
ದಕ್ಷಿಣ ಭಾರತದ ಅನೇಕ ದೇವಸ್ಥಾನಗಳಲ್ಲಿ ಹಾಗೂ ನಾಗರ ಹುತ್ತಗಳ ಬಳಿ ನಾಗನ ಕಲ್ಲುಗಳು ಸಾಮಾನ್ಯವಾಗಿ ಕಾಣಸಿಗುತ್ತವೆ. ಮಕ್ಕಳಿಲ್ಲದ ಮಹಿಳೆಯರು, ತಮಗೆ ಮಗು ಆಗಲಿ ಎಂದು ಹರಕೆ ಹೊತ್ತು, ಮಗು ಜನಿಸಿದ ನಂತರ ನಾಗರ ಕಲ್ಲನ್ನು ಪ್ರತಿಷ್ಠಾಪಿಸುವ ಪದ್ಧತಿಯೂ ಇದೆ.
ವಿಜಯನಗರ ಕಾಲಕ್ಕೆ ಸೇರಿದ ಇಂತಹ ಅನೇಕ ನಾಗರ ಕಲ್ಲುಗಳು ಪತ್ತೆಯಾಗಿವೆ. ಅವುಗಳಲ್ಲಿ ಆದಿಚಲ್ಲನೂರಿನ ನಾಗರ ಕಲ್ಲುಗಳು ವಿಶೇಷವಾಗಿವೆ, ಏಕೆಂದರೆ ಅವು ಸಾಮಾನ್ಯ ಕೆತ್ತನೆಯ ಕಲ್ಲುಗಳಲ್ಲದೆ ಮೂರು ಆಯಾಮಗಳಲ್ಲಿ (3D) ನಿರ್ಮಿಸಲಾಗಿದೆ.
18ನೇ ಶತಮಾನದಿಂದ ನಾಗಾರಾಧನೆ ಸುಬ್ರಹ್ಮಣ್ಯನ ಆರಾಧನೆಯೊಂದಿಗೆ ಬೆಸೆದುಕೊಂಡಿತು. ಇಂದಿಗೂ ಅನೇಕ ಕಡೆಗಳಲ್ಲಿ ಸುಬ್ರಹ್ಮಣ್ಯ ದೇವಸ್ಥಾನಗಳ ಸಮೀಪವೇ ನಾಗಾರಾಧನೆ ನಡೆಯುತ್ತದೆ. ಕರ್ನಾಟಕದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಇದಕ್ಕೆ ಪ್ರಸಿದ್ಧ ಉದಾಹರಣೆಯಾಗಿದೆ. ಇಲ್ಲಿ ಸುಬ್ರಹ್ಮಣ್ಯನನ್ನು ನಾಗಗಳ ಅಧಿಪತಿಯಾಗಿ ಆರಾಧಿಸಲಾಗುತ್ತದೆ.
ಎಸ್. ಆರ್. ರಾಮಾನುಜಂ ಅವರು ತೆಗೆದಿರುವ ಚಿತ್ರದಲ್ಲಿ ನಾಗರಕೋಯಿಲ್ ದೇವಸ್ಥಾನದ ಹೊರಭಾಗದಲ್ಲಿ ನಾಗ ಮೂರ್ತಿಗಳಿಗೆ ಪೂಜೆ ಸಲ್ಲಿಸುತ್ತಿರುವ ದೃಶ್ಯವನ್ನು ಕಾಣಬಹುದು.
ನಾಗರಕೋಯಿಲ್ನ ನಾಗರಾಜ ದೇವಸ್ಥಾನ (ಸಾಮಾನ್ಯ ಶಕೆ 9ರಿಂದ 12ನೇ ಶತಮಾನಕ್ಕೆ ಸಂಬಂದಿಸಿದ್ದು) ಈ ನಗರದ ಹೆಸರಿಗೆ ಕಾರಣವಾಗಿದೆ. ‘ನಾಗರ್’ ಎಂದರೆ ನಾಗ, ‘ಕೋಯಿಲ್’ ಎಂದರೆ ದೇವಸ್ಥಾನ. ಈ ದೇವಸ್ಥಾನದ ಗರ್ಭಗುಡಿಯ ನೆಲವನ್ನು ವಿಶೇಷವಾಗಿ ಮರಳಿನಿಂದ ನಿರ್ಮಿಸಲಾಗಿದೆ. ಇಲ್ಲಿ ಐದು ಹೆಡೆಗಳಿರುವ ನಾಗರಾಜನ ವಿಗ್ರಹವಿದೆ. ದೇವಸ್ಥಾನದಲ್ಲಿ ಪವಿತ್ರ ಪ್ರಸಾದವಾಗಿ ಒದ್ದೆಯಾದ ಮರಳನ್ನು ನೀಡಲಾಗುತ್ತದೆ.
ದಕ್ಷಿಣ ಭಾರತದಲ್ಲಿ ನಾಗಾರಾಧನೆಯ ಪರಂಪರೆ ಇಂದಿಗೂ ಜೀವಂತವಾಗಿದೆ. ವೈದ್ಯ ಸಮುದಾಯದವರು ‘ಡಕ್ಕೆ’ ಎಂಬ ಸಣ್ಣ ವಾದ್ಯವನ್ನು ನುಡಿಸುವುದರಲ್ಲಿ ಪರಿಣತರಾಗಿದ್ದು, ನಾಗದೇವತೆ ಮತ್ತು ಹಾವುಗಳಿಗೆ ಸಂಬಂಧಿಸಿದ ಆಚರಣೆಗಳ ಬಗ್ಗೆ ವಿಶೇಷ ಜ್ಞಾನ ಹೊಂದಿದ್ದಾರೆ ಎನ್ನಲಾಗುತ್ತದೆ.
ದಕ್ಷಿಣ ಭಾರತದ ಅನೇಕ ದೇವಸ್ಥಾನಗಳಲ್ಲಿ ಹಾಗೂ ನಾಗರ ಹುತ್ತಗಳ ಬಳಿ ನಾಗನ ಕಲ್ಲುಗಳು ಸಾಮಾನ್ಯವಾಗಿ ಕಾಣಸಿಗುತ್ತವೆ. ಮಕ್ಕಳಿಲ್ಲದ ಮಹಿಳೆಯರು, ತಮಗೆ ಮಗು ಆಗಲಿ ಎಂದು ಹರಕೆ ಹೊತ್ತು, ಮಗು ಜನಿಸಿದ ನಂತರ ನಾಗರ ಕಲ್ಲನ್ನು ಪ್ರತಿಷ್ಠಾಪಿಸುವ ಪದ್ಧತಿಯೂ ಇದೆ.
ವಿಜಯನಗರ ಕಾಲಕ್ಕೆ ಸೇರಿದ ಇಂತಹ ಅನೇಕ ನಾಗರ ಕಲ್ಲುಗಳು ಪತ್ತೆಯಾಗಿವೆ. ಅವುಗಳಲ್ಲಿ ಆದಿಚಲ್ಲನೂರಿನ ನಾಗರ ಕಲ್ಲುಗಳು ವಿಶೇಷವಾಗಿವೆ, ಏಕೆಂದರೆ ಅವು ಸಾಮಾನ್ಯ ಕೆತ್ತನೆಯ ಕಲ್ಲುಗಳಲ್ಲದೆ ಮೂರು ಆಯಾಮಗಳಲ್ಲಿ (3D) ನಿರ್ಮಿಸಲಾಗಿದೆ.
18ನೇ ಶತಮಾನದಿಂದ ನಾಗಾರಾಧನೆ ಸುಬ್ರಹ್ಮಣ್ಯನ ಆರಾಧನೆಯೊಂದಿಗೆ ಬೆಸೆದುಕೊಂಡಿತು. ಇಂದಿಗೂ ಅನೇಕ ಕಡೆಗಳಲ್ಲಿ ಸುಬ್ರಹ್ಮಣ್ಯ ದೇವಸ್ಥಾನಗಳ ಸಮೀಪವೇ ನಾಗಾರಾಧನೆ ನಡೆಯುತ್ತದೆ. ಕರ್ನಾಟಕದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಇದಕ್ಕೆ ಪ್ರಸಿದ್ಧ ಉದಾಹರಣೆಯಾಗಿದೆ. ಇಲ್ಲಿ ಸುಬ್ರಹ್ಮಣ್ಯನನ್ನು ನಾಗಗಳ ಅಧಿಪತಿಯಾಗಿ ಆರಾಧಿಸಲಾಗುತ್ತದೆ.
ಎಸ್. ಆರ್. ರಾಮಾನುಜಂ ಅವರು ತೆಗೆದಿರುವ ಚಿತ್ರದಲ್ಲಿ ನಾಗರಕೋಯಿಲ್ ದೇವಸ್ಥಾನದ ಹೊರಭಾಗದಲ್ಲಿ ನಾಗ ಮೂರ್ತಿಗಳಿಗೆ ಪೂಜೆ ಸಲ್ಲಿಸುತ್ತಿರುವ ದೃಶ್ಯವನ್ನು ಕಾಣಬಹುದು.