ಮಹಾಭಾರತವು ನರಕಾಸುರನನ್ನು ಪ್ರಾಗ್ಜ್ಯೋತಿಷ್ಪುರದ ಅರಸನೆಂದು ವರ್ಣಿಸುತ್ತದೆ. ಪ್ರಾಗ್ ಎಂದರೆ ಪೂರ್ವ, ಜ್ಯೋತಿಷ್ ಎಂದರೆ ಜ್ಞಾನ ಅಥವಾ ವಿದ್ಯೆ, ಮತ್ತು ಪುರ ಎಂದರೆ ನಗರ. ಕೆಲ ಪಂಡಿತರು ಈ ನಗರವನ್ನು ಭಾರತದ ವಾಯವ್ಯ ಭಾಗದಲ್ಲಿ ಸ್ಥಾಪಿಸಲ್ಪಟ್ಟಿತ್ತು ಎಂಬ ಅಭಿಪ್ರಾಯವಿದ್ದರೆ , ಕಾಶ್ಮೀರದ ಅಧಿಕೃತ ಇತಿಹಾಸ ಗ್ರಂಥವಾದ ರಾಜತರಂಗಿಣಿಯು ಪ್ರಾಗ್ಜ್ಯೋತಿಷಪುರವನ್ನು ಆಸಾಮ್ನ ಭಾಗವೆಂದು ಸೂಚಿಸುತ್ತದೆ.
ಸಾಮಾನ್ಯ ಶಕೆ ಹದಿಮೂರರಲ್ಲಿ ಅಹೋಮ್ ರಾಜವಂಶದವರು ಅಸ್ಸಾಂ ಭಾಗವನ್ನು ವಶಪಡಿಸಿಕೊಳ್ಳುವ ಮೊದಲು, ನರಕಾಸುರನ ಅನುವಂಶಿಕರಾದ ಮೂರು ಪ್ರಮುಖ ವಂಶಗಳು ಈ ಭೂಭಾಗವನ್ನು ಆಳಿದುವು. ವರ್ಮಣರು(ಸಾ.ಶ. 350–650 ), ಮ್ಲೇಚ್ಛರು ಅಥವಾ ಶಾಲಸ್ತಂಭರು (ಸಾ.ಶ.655–900) ಮತ್ತು ಪಾಲರು(ಸಾ.ಶ. 900–1100). ತದನಂತರ ಅಹೋಮ್ ವಂಶಸ್ಥರು 600 ವರ್ಷಗಳ ಕಾಲ ಆಳಿ, ಅಸ್ಸಾಂ ಎಂಬ ಹೆಸರಿಗೆ ಕಾರಣರಾದರು. ಅರ್ಥಶಾಸ್ತ್ರ ಹಾಗೂ ಪುರಾಣಗಳಲ್ಲಿ ಆಸಾಮ್ನ್ನು ಬಹುಪಾಲು ಕಾಮರೂಪ ಎಂದು ಉಲ್ಲೇಖಿಸಲಾಗಿದೆ. ಪ್ರಾಗ್ಜ್ಯೋತಿಷ್ಪುರವೇ ವರ್ಮಣರ ಮೊದಲ ರಾಜಧಾನಿಯಾಗಿತ್ತೆಂದು (ಸೂಕ್ತ ಪುರಾವೆಗಳಿಲ್ಲದಿದ್ದರೂ) ನಂಬಲಾಗುತ್ತದೆ. ಕಾಲಕ್ರಮೇಣ, ಪ್ರಾಗ್ಜ್ಯೋತಿಷ್ಪುರ, ಕಾಮರೂಪ ಮತ್ತು ಆಸಾಮ್ ಪರ್ಯಾಯ ಪದಗಳಾಗಿಬಿಟ್ಟವು.
ಚಿತ್ರ ಸಹಕಾರ: ವಿಕಿಮೀಡಿಯಾ; ನೇಪಾಳದಲ್ಲಿ ದೊರೆತ ೧೮ನೇ ಶತಮಾನದ ಭಾಗವತದಲ್ಲಿನ ನರಕನ ಪ್ರಾಗ್ಜ್ಯೋತಿಷಪುರದ ವರ್ಣನೆ.
ಮಹಾಭಾರತವು ನರಕಾಸುರನನ್ನು ಪ್ರಾಗ್ಜ್ಯೋತಿಷ್ಪುರದ ಅರಸನೆಂದು ವರ್ಣಿಸುತ್ತದೆ. ಪ್ರಾಗ್ ಎಂದರೆ ಪೂರ್ವ, ಜ್ಯೋತಿಷ್ ಎಂದರೆ ಜ್ಞಾನ ಅಥವಾ ವಿದ್ಯೆ, ಮತ್ತು ಪುರ ಎಂದರೆ ನಗರ. ಕೆಲ ಪಂಡಿತರು ಈ ನಗರವನ್ನು ಭಾರತದ ವಾಯವ್ಯ ಭಾಗದಲ್ಲಿ ಸ್ಥಾಪಿಸಲ್ಪಟ್ಟಿತ್ತು ಎಂಬ ಅಭಿಪ್ರಾಯವಿದ್ದರೆ , ಕಾಶ್ಮೀರದ ಅಧಿಕೃತ ಇತಿಹಾಸ ಗ್ರಂಥವಾದ ರಾಜತರಂಗಿಣಿಯು ಪ್ರಾಗ್ಜ್ಯೋತಿಷಪುರವನ್ನು ಆಸಾಮ್ನ ಭಾಗವೆಂದು ಸೂಚಿಸುತ್ತದೆ.
ಸಾಮಾನ್ಯ ಶಕೆ ಹದಿಮೂರರಲ್ಲಿ ಅಹೋಮ್ ರಾಜವಂಶದವರು ಅಸ್ಸಾಂ ಭಾಗವನ್ನು ವಶಪಡಿಸಿಕೊಳ್ಳುವ ಮೊದಲು, ನರಕಾಸುರನ ಅನುವಂಶಿಕರಾದ ಮೂರು ಪ್ರಮುಖ ವಂಶಗಳು ಈ ಭೂಭಾಗವನ್ನು ಆಳಿದುವು. ವರ್ಮಣರು(ಸಾ.ಶ. 350–650 ), ಮ್ಲೇಚ್ಛರು ಅಥವಾ ಶಾಲಸ್ತಂಭರು (ಸಾ.ಶ.655–900) ಮತ್ತು ಪಾಲರು(ಸಾ.ಶ. 900–1100). ತದನಂತರ ಅಹೋಮ್ ವಂಶಸ್ಥರು 600 ವರ್ಷಗಳ ಕಾಲ ಆಳಿ, ಅಸ್ಸಾಂ ಎಂಬ ಹೆಸರಿಗೆ ಕಾರಣರಾದರು. ಅರ್ಥಶಾಸ್ತ್ರ ಹಾಗೂ ಪುರಾಣಗಳಲ್ಲಿ ಆಸಾಮ್ನ್ನು ಬಹುಪಾಲು ಕಾಮರೂಪ ಎಂದು ಉಲ್ಲೇಖಿಸಲಾಗಿದೆ. ಪ್ರಾಗ್ಜ್ಯೋತಿಷ್ಪುರವೇ ವರ್ಮಣರ ಮೊದಲ ರಾಜಧಾನಿಯಾಗಿತ್ತೆಂದು (ಸೂಕ್ತ ಪುರಾವೆಗಳಿಲ್ಲದಿದ್ದರೂ) ನಂಬಲಾಗುತ್ತದೆ. ಕಾಲಕ್ರಮೇಣ, ಪ್ರಾಗ್ಜ್ಯೋತಿಷ್ಪುರ, ಕಾಮರೂಪ ಮತ್ತು ಆಸಾಮ್ ಪರ್ಯಾಯ ಪದಗಳಾಗಿಬಿಟ್ಟವು.
ಚಿತ್ರ ಸಹಕಾರ: ವಿಕಿಮೀಡಿಯಾ; ನೇಪಾಳದಲ್ಲಿ ದೊರೆತ ೧೮ನೇ ಶತಮಾನದ ಭಾಗವತದಲ್ಲಿನ ನರಕನ ಪ್ರಾಗ್ಜ್ಯೋತಿಷಪುರದ ವರ್ಣನೆ.