ಹಸ್ರತ್ ಮೊಹಾನಿ ಅವರೊಂದು ರಹಸ್ಯಾತ್ಮಕ ವ್ಯಕ್ತಿತ್ವವಾಗಿದ್ದರು – ಅನೇಕ ಸಾಧನೆಗಳಿದ್ದರೂ ಜನರಿಗೆ ಚಿರಪರಿಚಿತರಲ್ಲ. ಅವರು ರಾಷ್ಟ್ರವಾದಿಯಾಗಿದ್ದರು, ಅನೇಕರು ‘ಇನ್ಕಿಲಾಬ್ ಜಿಂದಾಬಾದ್’ ಘೋಷವಾಕ್ಯವನ್ನು ಇವರೇ ಚಾಲ್ತಿಗೆ ತಂದರೆಂದು ಹೇಳುತ್ತಾರೆ. ಅವರು ಕಮ್ಯುನಿಸ್ಟರಾಗಿದ್ದರು, ಭಾರತದಲ್ಲಿ ಕಮ್ಯುನಿಸ್ಟ್ ಪಕ್ಷದ ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದರು. ‘ಮೌಲಾನಾ’ ಎಂಬ ಬಿರುದಿನೊಂದಿಗೆ ಸೂಫಿ ಮುಸ್ಲಿಂ ವಿದ್ವಾಂಸರಾಗಿದ್ದರು. ಅವರು ಸಂವಿಧಾನ ಸಭೆಯ ಮುಸ್ಲಿಂ ಲೀಗ್ ಸದಸ್ಯರಾಗಿದ್ದರೂ, ಜಿನ್ನಾಹ್ ಅವರ ಸಂವಿಧಾನ ಸಭೆಯನ್ನು ಬಹಿಷ್ಕರಿಸುವ ಆದೇಶವನ್ನು ತಿರಸ್ಕರಿಸಿ, ದೇಶ ವಿಭಜನೆಯನ್ನು ವಿರೋಧಿಸಿದರು.
ಅವರು ಕೃಷ್ಣನಿಗೆ ಸಮರ್ಪಿತವಾದ ಭಕ್ತಿಯ ಕವಿತೆಗಳನ್ನು ಉರ್ದು ಮತ್ತು ಅವಧಿಯ ಭಾಷೆಗಳು ಮಿಶ್ರಿತವಾದ, ಅವರು ‘ಭಾಷಾ’ ಎಂದು ಹೆಸರಿಟ್ಟ ಶೈಲಿಯಲ್ಲಿ ಬರೆದರು. ಈ ಕವಿತೆಗಳಲ್ಲಿ ಅವರು ಗಂಗಾ-ಯಮುನಾ ಪ್ರದೇಶದ ಮುಸ್ಲಿಂ ಭಕ್ತಿ ಕವಿಗಳಾದ ರಹೀಮ್ ಮುಂತಾದವರು ಮುನ್ನೆಲೆಗೆ ತಂದ ಭಕ್ತಿಮಾರ್ಗವನ್ನು ಅನುಸರಿಸಿದರು.
ಅವರು ಬರೆದಿದ್ದಾರೆ (ಮೂಲ ಕವಿತೆ (ಉರ್ದು/ಅವಧಿ):
“ಕುಚ್ ಹಮ್ ಕೋ ಭೀ ‘ಅತಾ ಹೋ ಕಿ ಐ ಹಜರತ್-ಇ-ಕಿರಿಶ್ನ,
ಇಕ್ಲೀಮ್-ಇ-‘ಇಶ್ಕ್ ಆಪ್ ಕೆ ಜೆರ್-ಇ-ಕದಮ್ ಹೈ ಖಾಸ್,
ಹಸ್ರತ್ ಕೀ ಭೀ ಕುಬೂಲ್ ಹೋ ಮಥುರಾ ಮೇಂ ಹಾಜಿರೀ,
ಸುಂತೆ ಹೈಂ ‘ಆಶಿಕೋಂ ಪೆ ತುಮ್ಹಾರಾ ಕರಮ್ ಹೈ ಖಾಸ್”
ಅಂದರೆ, (ಕನ್ನಡ ಅನುವಾದ):
“ಆದರಣೀಯ ಕೃಷ್ಣ, ನನಗೂ ಕೊಂಚ ಕೃಪೆಯನ್ನು ದಯಪಾಲಿಸಿ,
ಏಕೆಂದರೆ ನಿಮ್ಮ ಪಾದಗಳ ಕೆಳಗೆ ಪ್ರೀತಿಯ ಸಂಪೂರ್ಣ ಸಾಮ್ರಾಜ್ಯವಿದೆ.
ಮಥುರೆಯಲ್ಲಿ ಹಸ್ರತ್ನ ಉಪಸ್ಥಿತಿಯನ್ನು ಸ್ವೀಕರಿಸಿ,
ನೀವು ಪ್ರೇಮಿಗಳಿಗೆ ವಿಶೇಷವಾಗಿ ಕರುಣಾಮಯಿಯಾಗಿದ್ದೀರಿ ಎಂದು ಕೇಳಿದ್ದೇನೆ”.
ಈ ವಿಕಿಮೀಡಿಯಾ ಚಿತ್ರದಲ್ಲಿ, 1949ರಲ್ಲಿ ಹಸ್ರತ್ ಮೊಹಾನಿ ಅವರು ಅಂಬೇಡ್ಕರ್ರೊಂದಿಗೆ ಕಾಣಿಸಿಕೊಂಡಿದ್ದಾರೆ.
ಮೂಲ: ಸಿಎಂ ನೈಮ್, ‘ದಿ ಮೌಲಾನಾ ವ್ಹೂ ಲವ್ಡ್ ಕೃಷ್ಣ’, ಇಪಿಡಬ್ಲ್ಯೂ ಏಪ್ರಿಲ್ 2013
ಹಸ್ರತ್ ಮೊಹಾನಿ ಅವರೊಂದು ರಹಸ್ಯಾತ್ಮಕ ವ್ಯಕ್ತಿತ್ವವಾಗಿದ್ದರು – ಅನೇಕ ಸಾಧನೆಗಳಿದ್ದರೂ ಜನರಿಗೆ ಚಿರಪರಿಚಿತರಲ್ಲ. ಅವರು ರಾಷ್ಟ್ರವಾದಿಯಾಗಿದ್ದರು, ಅನೇಕರು ‘ಇನ್ಕಿಲಾಬ್ ಜಿಂದಾಬಾದ್’ ಘೋಷವಾಕ್ಯವನ್ನು ಇವರೇ ಚಾಲ್ತಿಗೆ ತಂದರೆಂದು ಹೇಳುತ್ತಾರೆ. ಅವರು ಕಮ್ಯುನಿಸ್ಟರಾಗಿದ್ದರು, ಭಾರತದಲ್ಲಿ ಕಮ್ಯುನಿಸ್ಟ್ ಪಕ್ಷದ ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದರು. ‘ಮೌಲಾನಾ’ ಎಂಬ ಬಿರುದಿನೊಂದಿಗೆ ಸೂಫಿ ಮುಸ್ಲಿಂ ವಿದ್ವಾಂಸರಾಗಿದ್ದರು. ಅವರು ಸಂವಿಧಾನ ಸಭೆಯ ಮುಸ್ಲಿಂ ಲೀಗ್ ಸದಸ್ಯರಾಗಿದ್ದರೂ, ಜಿನ್ನಾಹ್ ಅವರ ಸಂವಿಧಾನ ಸಭೆಯನ್ನು ಬಹಿಷ್ಕರಿಸುವ ಆದೇಶವನ್ನು ತಿರಸ್ಕರಿಸಿ, ದೇಶ ವಿಭಜನೆಯನ್ನು ವಿರೋಧಿಸಿದರು.
ಅವರು ಕೃಷ್ಣನಿಗೆ ಸಮರ್ಪಿತವಾದ ಭಕ್ತಿಯ ಕವಿತೆಗಳನ್ನು ಉರ್ದು ಮತ್ತು ಅವಧಿಯ ಭಾಷೆಗಳು ಮಿಶ್ರಿತವಾದ, ಅವರು ‘ಭಾಷಾ’ ಎಂದು ಹೆಸರಿಟ್ಟ ಶೈಲಿಯಲ್ಲಿ ಬರೆದರು. ಈ ಕವಿತೆಗಳಲ್ಲಿ ಅವರು ಗಂಗಾ-ಯಮುನಾ ಪ್ರದೇಶದ ಮುಸ್ಲಿಂ ಭಕ್ತಿ ಕವಿಗಳಾದ ರಹೀಮ್ ಮುಂತಾದವರು ಮುನ್ನೆಲೆಗೆ ತಂದ ಭಕ್ತಿಮಾರ್ಗವನ್ನು ಅನುಸರಿಸಿದರು.
ಅವರು ಬರೆದಿದ್ದಾರೆ (ಮೂಲ ಕವಿತೆ (ಉರ್ದು/ಅವಧಿ):
“ಕುಚ್ ಹಮ್ ಕೋ ಭೀ ‘ಅತಾ ಹೋ ಕಿ ಐ ಹಜರತ್-ಇ-ಕಿರಿಶ್ನ,
ಇಕ್ಲೀಮ್-ಇ-‘ಇಶ್ಕ್ ಆಪ್ ಕೆ ಜೆರ್-ಇ-ಕದಮ್ ಹೈ ಖಾಸ್,
ಹಸ್ರತ್ ಕೀ ಭೀ ಕುಬೂಲ್ ಹೋ ಮಥುರಾ ಮೇಂ ಹಾಜಿರೀ,
ಸುಂತೆ ಹೈಂ ‘ಆಶಿಕೋಂ ಪೆ ತುಮ್ಹಾರಾ ಕರಮ್ ಹೈ ಖಾಸ್”
ಅಂದರೆ, (ಕನ್ನಡ ಅನುವಾದ):
“ಆದರಣೀಯ ಕೃಷ್ಣ, ನನಗೂ ಕೊಂಚ ಕೃಪೆಯನ್ನು ದಯಪಾಲಿಸಿ,
ಏಕೆಂದರೆ ನಿಮ್ಮ ಪಾದಗಳ ಕೆಳಗೆ ಪ್ರೀತಿಯ ಸಂಪೂರ್ಣ ಸಾಮ್ರಾಜ್ಯವಿದೆ.
ಮಥುರೆಯಲ್ಲಿ ಹಸ್ರತ್ನ ಉಪಸ್ಥಿತಿಯನ್ನು ಸ್ವೀಕರಿಸಿ,
ನೀವು ಪ್ರೇಮಿಗಳಿಗೆ ವಿಶೇಷವಾಗಿ ಕರುಣಾಮಯಿಯಾಗಿದ್ದೀರಿ ಎಂದು ಕೇಳಿದ್ದೇನೆ”.
ಈ ವಿಕಿಮೀಡಿಯಾ ಚಿತ್ರದಲ್ಲಿ, 1949ರಲ್ಲಿ ಹಸ್ರತ್ ಮೊಹಾನಿ ಅವರು ಅಂಬೇಡ್ಕರ್ರೊಂದಿಗೆ ಕಾಣಿಸಿಕೊಂಡಿದ್ದಾರೆ.
ಮೂಲ: ಸಿಎಂ ನೈಮ್, ‘ದಿ ಮೌಲಾನಾ ವ್ಹೂ ಲವ್ಡ್ ಕೃಷ್ಣ’, ಇಪಿಡಬ್ಲ್ಯೂ ಏಪ್ರಿಲ್ 2013