369

ಹನುಮಂತನ ಕಥೆಗಳ ರಸಪ್ರಶ್ನೆ

ನಮಗೆಲ್ಲಾ ಅತಿ ಪ್ರೀತಿ ಪಾತ್ರನಾದ ದೇವರುಗಳಲ್ಲಿ ಒಬ್ಬ, ಹನುಮಂತ. ನಮ್ಮೂರಿನ ಸಣ್ಣ ಗಲ್ಲಿಯೊಂದರ ಮೂಲೆಯಲ್ಲಿನ ಪುಟ್ಟ ಗುಡಿಯಿಂದ ಹಿಡಿದು ಭೀಮಾಕಾರನಾಗಿ ಬೆಳೆದಿರುವ ಹನುಮಂತನ ಬೃಹತ್ ದೇವಾಲಯಗಳವರೆಗೆ ಅವನು ಸರ್ವವ್ಯಾಪಿ. ನೂರಾರು ಹೆಸರುಗಳಿಂದ ಪ್ರಸಿದ್ಧನಾದ ಆಂಜನೇಯನ ಕಥೆಗಳೂ ಸಾವಿರಾರು. ಹನುಮಾನ್ ಜಯಂತಿಯಾದ ಇಂದು, ಅವನ ೧೨ ಜನಪ್ರಿಯ ಕಥೆಗಳನ್ನು ನೆನಪಿಸಿಕೊಳ್ಳೋಣ. ತಾಯಿಯ ಹೆಸರಿನಿಂದ ಕರೆಸಿಕೊಳ್ಳುವ ಇವನ ಮಾತೆ ಯಾರು? ನೈಷ್ಠಿಕ ಬ್ರಹ್ಮಚಾರಿಯಾದ ಇವನಿಗೆ ಮಗನಿರುವನೇ? ಮಹಾಭಾರತದಲ್ಲಿ ಅತಿ ಪರಾಕ್ರಮಿಯಾದ ದೈವಾಂಶ ಸಂಭೂತನಾದ ಇವನ ತಮ್ಮನಾರು?… ಜೈ ಬಜರಂಗ ಬಲಿ!

ಭಾರತದಲ್ಲಿ ತಯಾರಾದ ಮೊಟ್ಟಮೊದಲ ಜಪಾನ್ ಕಾರಿನ ಹೆಸರು ಮಾರುತಿ. ಈ ಕಾರ್ಯದಲ್ಲಿ ಸುಜುಕಿ ಕಂಪೆನಿಯೊಂದಿಗೆ ಕೈಜೋಡಿಸಿದವರಾರು?

ಹನುಮನ ಜನಪ್ರಿಯ ಹೆಸರುಗಳಲ್ಲಿ ಆಂಜನೇಯ ಒಂದು. ಅದು ಯಾರಿಂದ ಬಂದದ್ದು?

ಹನುಮ ಶಬ್ದದ ಅರ್ಥ, ವಿರೂಪಗೊಂಡ ದವಡೆ ಎಂದು. ಈ ಹೆಸರು ಯಾವ ಪೌರಾಣಿಕ ಕಥಾನಕಕ್ಕೆ ಸಂಬಂಧಪಟ್ಟದ್ದು?

ಕುರುಕ್ಷೇತ್ರ ಯುದ್ಧದಲ್ಲಿ ಹನುಮಂತನ ಲಾಂಛನವಿದ್ದ ಬಾವುಟ ಯಾರ ರಥದ್ದಾಗಿದ್ದಿತು?

ಹನುಮಂತನು ಚಿರಂಜೀವಿಯಾಗಲು ಕಾರಣರಾರು?

ಮನುಕುಲದ ಅನನ್ಯ ರಕ್ಷಕನೆಂಬ ಆಶಯವನ್ನು ಸೂಚಿಸುವ ಆಂಜನೇಯನ ಹೆಸರು ಯಾವುದು?

ಅಯೋಧ್ಯೆಯಲ್ಲಿರುವ ಹನುಮಾನ್ ಗಢಿ ಪೂಜನೀಯವಾದ ತಾಣ. ಅಲ್ಲಿ ಹನುಮಂತನು ಯಾವ ರೂಪದಲ್ಲಿರುವನು?

ಹನುಮಂತನು ಬ್ರಹ್ಮಚಾರಿ ಎಂಬುದು ಲೋಕವು ನಂಬಿದ ಮಾತು. ಕೆಲವು ಕಥೆಗಳ ಪ್ರಕಾರ ಅವನಿಗೊಬ್ಬ ಮಗನಿದ್ದನೆಂದು ತಿಳಿದುಬರುತ್ತದೆ. ಅವನ ಮಗ ಯಾರು?

ರಾಮ-ಹನುಮರ ಮಿಲನವು ಕಿಷ್ಕಿಂಧೆಯಲ್ಲಿ ಆಯಿತು. ಕಿಷ್ಕಿಂಧೆಯು ಭಾರತದ ಯಾವ ರಾಜ್ಯದಲ್ಲಿದೆ?

ಪ್ರಖ್ಯಾತವಾದ ಜ್ಯೋತಿರ್ಲಿಂಗವನ್ನು ಹೊದಿರುವಂತಹ ಪಟ್ಟಣದಲ್ಲಿ ಪಂಚಮುಖಿ ಹನುಮಂತನ ದೇವಾಲಯವಿದೆ. ಯಾವುದು ಆ ಪಟ್ಟಣ?

ಹನುಮಂತನು ಸಂಜೀವನಿ ಮೂಲಿಕೆಯನ್ನು ತರಲು ಹಿಮಾಲಯಕ್ಕೆ ಹೋಗುತ್ತಿದ್ದಾಗ, ಹಿಮಾಚಲ ಪ್ರದೇಶದಲ್ಲಿರುವ ಈ ಜಾಗದಲ್ಲಿ ಸ್ವಲ್ಪ ಕಾಲ ವಿಶ್ರಮಿಸಿದನು. ಅಲ್ಲೀಗ ಪ್ರಖ್ಯಾತವಾದ ದೇವಾಲಯವಿರುವುದು. ಆ ಜಾಗವಾವುದು?

ಸಂಜೀವನಿ ಮೂಲಿಕೆಯನ್ನು ತರಲು ಹೋದ ಹನುಮಂತನು ಸಿಕ್ಕಿಮ್ ನ ಗ್ಯಾಂಗ್ ತೋಕ್ ಬಳಿ ಇರುವ ಹನುಮಾನ್ ತೋಕ್ ನಲ್ಲಿ ವಿಶ್ರಾಂತಿ ಪಡೆದನೆಂದು ಪ್ರತೀತಿ. ಈ ದೇವಾಲಯದ ನಿರ್ವಹಣೆಯನ್ನು ಯಾರು ವಹಿಸಿರುವರು?

ನಿರ್ಗಮನ

How did you like this quiz?

Get quiz links

We will send you quiz links at 6 AM on festival days. Nothing else 

Opt In

× Notify Me