ವೇದಗಳ ದ್ವಿತೀಯ ಜ್ಞಾನಭಾಗ ಉಪವೇದ. ವೇದಗಳು ಜೀವನದ ಆಧ್ಯಾತ್ಮಿಕ ಅಂಶವಾದ ಧರ್ಮ ಮತ್ತು ಮೋಕ್ಷದ ಬಗ್ಗೆ ತಿಳಿ ಹೇಳಿದರೆ, ಉಪವೇದಗಳು ಅರ್ಥ – (ಭೌತಿಕ ಸಾಧನಗಳು) ಮತ್ತು ಕಾಮ (ಪ್ರೇರಣೆ/ಆಸೆ) ಬಗ್ಗೆ ಹೇಳುತ್ತವೆ . ಉಪವೇದಗಳು ಭೌತಿಕ ಜಗತ್ತಿನಲ್ಲಿ ನಮ್ಮ ಕೆಲಸ ಕಾರ್ಯಗಳ ಮೇಲೆ ಗಮನ ಕೇಂದ್ರೀಕರಿಸಿ – ಧರ್ಮದಲ್ಲಿ ಬೇರೂರಿದ ಪ್ರಾಯೋಗಿಕ ಅನ್ವಯಗಳ ಉದಾಹರಣೆಗಳನ್ನು ನೀಡುತ್ತವೆ. ನಾಲ್ಕು ವೇದಗಳಿಗೆ ಸುಮಾರಾಗಿ ಅನ್ವಯವಾಗುವ ಹಾಗೆ – ಆಯುರ್ವೇದ, ಅರ್ಥವೇದ, ಗಂಧರ್ವವೇದ ಮತ್ತು ಸ್ಥಾಪತ್ಯವೇದ – ಹೀಗೆ ನಾಲ್ಕು ಉಪವೇದಗಳ ರಚನೆಯಾಗಿದೆ. ಅರ್ಥಶಾಸ್ತ್ರ – ಅರ್ಥವೇದದ ಪ್ರಮುಖ ಪಠ್ಯವಾಗಿದ್ದು, ಆಡಳಿತ, ರಾಜ್ಯವನ್ನು ಸ್ವಾಧೀನಪಡಿಸಿಕೊಳ್ಳುವ – ನಿರ್ವಹಿಸುವ ಮತ್ತು ನಡೆಸಿಕೊಂಡು ಹೋಗುವ ಕಲೆಯ ಮೇಲೆ ಕೇಂದ್ರೀಕ್ರತವಾಗಿದೆ. ಇದು ಅರ್ಥಶಾಸ್ತ್ರ, ರಾಜಕೀಯ ವಿಜ್ಞಾನ, ಕಾನೂನು, ನೀತಿಶಾಸ್ತ್ರ, ಸಮಾಜಶಾಸ್ತ್ರ, ನ್ಯಾಯಶಾಸ್ತ್ರ, ರಕ್ಷಣೆ, ನಿರ್ವಹಣೆ, ವ್ಯಾಪಾರ ಮತ್ತು ವಾಣಿಜ್ಯ, ನಗರಪಾಲಿಕೆ ಮತ್ತು ಸೇನೆಗೆ ಸಂಬಂಧಿಸಿದ ಅಭಿಯಂತ್ರಿಕೆ, ಬೇಹುಗಾರಿಕೆ ಇತ್ಯಾದಿಗಳ ಅಧ್ಯಯನವನ್ನು ಒಳಗೊಂಡಿದೆ.
ಅರ್ಥಶಾಸ್ತ್ರವು ಆಡಳಿತದ ಗುರಿಯನ್ನು ಸ್ಪಷ್ಟವಾಗಿ ಹೀಗೆ ಸಂಕ್ಷೇಪಿಸುತ್ತದೆ – ” ಪ್ರಜೆಗಳ ಸಂತೋಷದಲ್ಲಿಯೇ ರಾಜನ ಸಂತೋಷ; ಅವರ ಕಲ್ಯಾಣದಲ್ಲಿ, ಅವನ ಕಲ್ಯಾಣ.”
ಅರ್ಥ ಎಂದರೆ ಸಂಪತ್ತು ಅಥವಾ ಸಮೃದ್ಧಿ ಅಥವಾ ವಸ್ತು ಸಾಧನ.
ಇಂದಿನ ಪ್ರಸ್ತುತತೆ: ವಿದೇಶಿ ರಾಯಭಾರ ಕಚೇರಿಗಳು ಮತ್ತು ದೂತಾವಾಸಗಳನ್ನು ಇರಿಸಲು ದೆಹಲಿಯಲ್ಲಿ ರಾಜತಾಂತ್ರಿಕ ಸಂಕೀರ್ಣವನ್ನು ರಚಿಸಿದಾಗ, ಸೂಕ್ತವಾಗಿಯೇ ಇದಕ್ಕೆ ಚಾಣಕ್ಯಪುರಿ ಎಂದು ಹೆಸರಿಸಲಾಯಿತು. ಭಾರತೀಯ ಆಡಳಿತ ತತ್ವಶಾಸ್ತ್ರವನ್ನು ಯಥೋಚಿತವಾಗಿ ಪ್ರತಿಬಿಂಬಿಸಲು ಈ ಆವರಣದ ನಾಲ್ಕು ಮುಖ್ಯ ರಸ್ತೆಗಳನ್ನು ಧರ್ಮ ಮಾರ್ಗ, ಸತ್ಯ ಮಾರ್ಗ, ನ್ಯಾಯ ಮಾರ್ಗ, ಶಾಂತಿ ಮಾರ್ಗ ಎಂದು ಹೆಸರಿಸಲಾಗಿದೆ, .
ಚಿತ್ರವು ದೆಹಲಿಯ ಚಾಣಕ್ಯಪುರಿಯದ್ದಾಗಿದೆ.
ವೇದಗಳ ದ್ವಿತೀಯ ಜ್ಞಾನಭಾಗ ಉಪವೇದ. ವೇದಗಳು ಜೀವನದ ಆಧ್ಯಾತ್ಮಿಕ ಅಂಶವಾದ ಧರ್ಮ ಮತ್ತು ಮೋಕ್ಷದ ಬಗ್ಗೆ ತಿಳಿ ಹೇಳಿದರೆ, ಉಪವೇದಗಳು ಅರ್ಥ – (ಭೌತಿಕ ಸಾಧನಗಳು) ಮತ್ತು ಕಾಮ (ಪ್ರೇರಣೆ/ಆಸೆ) ಬಗ್ಗೆ ಹೇಳುತ್ತವೆ . ಉಪವೇದಗಳು ಭೌತಿಕ ಜಗತ್ತಿನಲ್ಲಿ ನಮ್ಮ ಕೆಲಸ ಕಾರ್ಯಗಳ ಮೇಲೆ ಗಮನ ಕೇಂದ್ರೀಕರಿಸಿ – ಧರ್ಮದಲ್ಲಿ ಬೇರೂರಿದ ಪ್ರಾಯೋಗಿಕ ಅನ್ವಯಗಳ ಉದಾಹರಣೆಗಳನ್ನು ನೀಡುತ್ತವೆ. ನಾಲ್ಕು ವೇದಗಳಿಗೆ ಸುಮಾರಾಗಿ ಅನ್ವಯವಾಗುವ ಹಾಗೆ – ಆಯುರ್ವೇದ, ಅರ್ಥವೇದ, ಗಂಧರ್ವವೇದ ಮತ್ತು ಸ್ಥಾಪತ್ಯವೇದ – ಹೀಗೆ ನಾಲ್ಕು ಉಪವೇದಗಳ ರಚನೆಯಾಗಿದೆ. ಅರ್ಥಶಾಸ್ತ್ರ – ಅರ್ಥವೇದದ ಪ್ರಮುಖ ಪಠ್ಯವಾಗಿದ್ದು, ಆಡಳಿತ, ರಾಜ್ಯವನ್ನು ಸ್ವಾಧೀನಪಡಿಸಿಕೊಳ್ಳುವ – ನಿರ್ವಹಿಸುವ ಮತ್ತು ನಡೆಸಿಕೊಂಡು ಹೋಗುವ ಕಲೆಯ ಮೇಲೆ ಕೇಂದ್ರೀಕ್ರತವಾಗಿದೆ. ಇದು ಅರ್ಥಶಾಸ್ತ್ರ, ರಾಜಕೀಯ ವಿಜ್ಞಾನ, ಕಾನೂನು, ನೀತಿಶಾಸ್ತ್ರ, ಸಮಾಜಶಾಸ್ತ್ರ, ನ್ಯಾಯಶಾಸ್ತ್ರ, ರಕ್ಷಣೆ, ನಿರ್ವಹಣೆ, ವ್ಯಾಪಾರ ಮತ್ತು ವಾಣಿಜ್ಯ, ನಗರಪಾಲಿಕೆ ಮತ್ತು ಸೇನೆಗೆ ಸಂಬಂಧಿಸಿದ ಅಭಿಯಂತ್ರಿಕೆ, ಬೇಹುಗಾರಿಕೆ ಇತ್ಯಾದಿಗಳ ಅಧ್ಯಯನವನ್ನು ಒಳಗೊಂಡಿದೆ.
ಅರ್ಥಶಾಸ್ತ್ರವು ಆಡಳಿತದ ಗುರಿಯನ್ನು ಸ್ಪಷ್ಟವಾಗಿ ಹೀಗೆ ಸಂಕ್ಷೇಪಿಸುತ್ತದೆ – ” ಪ್ರಜೆಗಳ ಸಂತೋಷದಲ್ಲಿಯೇ ರಾಜನ ಸಂತೋಷ; ಅವರ ಕಲ್ಯಾಣದಲ್ಲಿ, ಅವನ ಕಲ್ಯಾಣ.”
ಅರ್ಥ ಎಂದರೆ ಸಂಪತ್ತು ಅಥವಾ ಸಮೃದ್ಧಿ ಅಥವಾ ವಸ್ತು ಸಾಧನ.
ಇಂದಿನ ಪ್ರಸ್ತುತತೆ: ವಿದೇಶಿ ರಾಯಭಾರ ಕಚೇರಿಗಳು ಮತ್ತು ದೂತಾವಾಸಗಳನ್ನು ಇರಿಸಲು ದೆಹಲಿಯಲ್ಲಿ ರಾಜತಾಂತ್ರಿಕ ಸಂಕೀರ್ಣವನ್ನು ರಚಿಸಿದಾಗ, ಸೂಕ್ತವಾಗಿಯೇ ಇದಕ್ಕೆ ಚಾಣಕ್ಯಪುರಿ ಎಂದು ಹೆಸರಿಸಲಾಯಿತು. ಭಾರತೀಯ ಆಡಳಿತ ತತ್ವಶಾಸ್ತ್ರವನ್ನು ಯಥೋಚಿತವಾಗಿ ಪ್ರತಿಬಿಂಬಿಸಲು ಈ ಆವರಣದ ನಾಲ್ಕು ಮುಖ್ಯ ರಸ್ತೆಗಳನ್ನು ಧರ್ಮ ಮಾರ್ಗ, ಸತ್ಯ ಮಾರ್ಗ, ನ್ಯಾಯ ಮಾರ್ಗ, ಶಾಂತಿ ಮಾರ್ಗ ಎಂದು ಹೆಸರಿಸಲಾಗಿದೆ, .
ಚಿತ್ರವು ದೆಹಲಿಯ ಚಾಣಕ್ಯಪುರಿಯದ್ದಾಗಿದೆ.