ಮನುಕುಲವನ್ನು ಕಾಪಾಡಿದ ಮೀನಿನ ಕಥೆಯನ್ನು ಮಹಭಾರತದಲ್ಲಿ ಮೊದಲು ಕಾಣಬಹುದು. ಪುಟ್ಟ ಮೀನೊಂದು ಮನುವನ್ನು ಕುರಿತು, ತನ್ನನ್ನು ಕಾಪಾಡಿದರೆ, ತಾನು ಮುಂದೊಂದು ದಿನ ಅವನನ್ನು ಕಾಪಾಡುವುದಾಗಿ ಹೇಳಿತು. ಅದನ್ನು ರಕ್ಷಿಸಿದ ಮನು ಅದನ್ನು ಪುಟ್ಟ ಹೂಜಿಯಲ್ಲಿಟ್ಟನು. ಅಲ್ಪಕಾಲದಲ್ಲೇ ಆ ಮೀನು ಎಷ್ಟು ಬೆಳೆಯಿತೆಂದರೆ ಕ್ರಮವಾಗಿ ಹೂಜಿಯಿಂದ ಬಾವಿಗೆ, ಬಾವಿಯಿಂದ ಕೊಳಕ್ಕೆ, ಕೊಳದಿಂದ ನದಿಗೆ, ನಂತರ ಸಾಗರಕ್ಕೆ ಸ್ಥಳಾಂತರಿಸಲ್ಪಟ್ಟಿತು. ಜಲಪ್ರಳಯವು ಸಂಭವಿಸುವುದೆಂದು ಮನುವಿಗೆ ತಿಳಿಸಿದ ಮೀನು, ದೊಡ್ಡದೊಂದು ಹಡಗನ್ನು ಕಟ್ಟಲು ಹೇಳಿತು. ಅಂತೆಯೇ ಮಹಾಪ್ರಳಯದಲ್ಲಿ ಸಮಸ್ತವೂ ನಾಶವಾಗಲು, ಬೃಹತ್ತಾಗಿ ಬೆಳೆದಿದ್ದ ಆ ಮೀನು ನಾವೆಯನ್ನೂ, ಮನುವನ್ನೂ ಸಂರಕ್ಷಿಸಿತು. ಒಬ್ಬಂಟಿಯಾಗಿದ್ದ ಮನುವನ್ನು ಸಂತೈಸಿ, ಪುನಃ ಸೃಷ್ಟಿಕಾರ್ಯವನ್ನು ಪ್ರಾರಂಭಿಸುವಂತೆ ಆಶೀವ೯ದಿಸಿತು.
ಮತ್ಸ್ಯ ಪುರಾಣದಲ್ಲಿ, ಆ ತಿಮಿಂಗಿಲವು ದಾನವ ಹಯಗ್ರೀವನಿಂದ ವೇದಗಳನ್ನು ರಕ್ಷಿಸಿತು. ಇದಾದ ನಂತರ ರಾಜ ಸತ್ಯವ್ರತನನ್ನು ಕಂಡು, ಮನುವಿನ ಕಥೆಯಂತೆಯೇ ಪುನಃ ಸೃಷ್ಟಿಕಾರ್ಯವನ್ನು ಪ್ರಾರಂಭಿಸುವಂತೆ ಹೇಳಿತು. ಬೇಟ್ ದ್ವಾರಕಾದ ಬಳಿ ಅಪರೂಪವಾದ ಮತ್ಸ್ಯ ದೇವಾಲಯವಿದೆ. ಈ ದೇವಾಲಯವು ಯಾದವ ಕುಲವನ್ನೇ ಅಳಿಸಿಹಾಕಿದ ಪ್ರಳಯವನ್ನು ಕಂಡಿದೆ. ನೋವಾನ ಕಥೆಯಲ್ಲಿ ನಮ್ಮ ಪುರಾಣಗಳ ಕಥೆಗಿಂತ ಭಿನ್ನವಾಗಿ, ಪ್ರಾಣಿಗಳೂ ನಾವೆಯಲ್ಲಿ ಸುರಕ್ಷಿತವಾದವು ಎಂದು ಚಿತ್ರಿತವಾಗಿದೆ. ಈ ಮಹಾಪ್ರಳಯದ ಕಥೆಯನ್ನುಎಲ್ಲ ಪುರಾತನ ನಾಗರಿಕತೆಯಲ್ಲಿಯೂ ಕಾಣಬಹುದು. ಇದು ಬಹುಶಃ ಯಾವುದೋ ಹಳೆಯ ವಿಪತ್ತಿನ ಸ್ಮೃತಿಯೂ ಇರಬಹುದು. ಈ ಕಥೆಯು ಮೊಟ್ಟಮೊದಲಿಗೆ ಬಾಬಿಲೋನಿಯಾದಲ್ಲಿ ದೊರೆತ ಆವೆಮಣ್ಣಿನ ಅಚ್ಚುಗಳಲ್ಲಿ ಮತ್ತು ಸಾಮಾನ್ಯ ಪೂವ೯ ಶಕೆ ೩ ರನೆಯ ಕಾಲಘಟ್ಟದಲ್ಲಿ,ಮೆಸೆಪೊಟೋಮಿಯಾದಲ್ಲಿ ಗಿಲ್ಗಮೆಶ್ ನು ಬರೆದ ಗ್ರಂಥದಲ್ಲಿ ಕಾಣಸಿಕ್ಕಿತು.
ಚಿತ್ರ: ತಿರುಪತಿ ಬಳಿಯ ವೇದನಾರಾಯಣ ಸ್ವಾಮಿಯ ದೇವಾಲಯ, ಆಂಧ್ರ ಪ್ರದೇಶ; ಮತ್ಸ್ಯ ನಾರಾಯಣನಾಗಿ ವಿಷ್ಣು ಗೋಚರಿಸುತ್ತಿರುವುದು.
ಮನುಕುಲವನ್ನು ಕಾಪಾಡಿದ ಮೀನಿನ ಕಥೆಯನ್ನು ಮಹಭಾರತದಲ್ಲಿ ಮೊದಲು ಕಾಣಬಹುದು. ಪುಟ್ಟ ಮೀನೊಂದು ಮನುವನ್ನು ಕುರಿತು, ತನ್ನನ್ನು ಕಾಪಾಡಿದರೆ, ತಾನು ಮುಂದೊಂದು ದಿನ ಅವನನ್ನು ಕಾಪಾಡುವುದಾಗಿ ಹೇಳಿತು. ಅದನ್ನು ರಕ್ಷಿಸಿದ ಮನು ಅದನ್ನು ಪುಟ್ಟ ಹೂಜಿಯಲ್ಲಿಟ್ಟನು. ಅಲ್ಪಕಾಲದಲ್ಲೇ ಆ ಮೀನು ಎಷ್ಟು ಬೆಳೆಯಿತೆಂದರೆ ಕ್ರಮವಾಗಿ ಹೂಜಿಯಿಂದ ಬಾವಿಗೆ, ಬಾವಿಯಿಂದ ಕೊಳಕ್ಕೆ, ಕೊಳದಿಂದ ನದಿಗೆ, ನಂತರ ಸಾಗರಕ್ಕೆ ಸ್ಥಳಾಂತರಿಸಲ್ಪಟ್ಟಿತು. ಜಲಪ್ರಳಯವು ಸಂಭವಿಸುವುದೆಂದು ಮನುವಿಗೆ ತಿಳಿಸಿದ ಮೀನು, ದೊಡ್ಡದೊಂದು ಹಡಗನ್ನು ಕಟ್ಟಲು ಹೇಳಿತು. ಅಂತೆಯೇ ಮಹಾಪ್ರಳಯದಲ್ಲಿ ಸಮಸ್ತವೂ ನಾಶವಾಗಲು, ಬೃಹತ್ತಾಗಿ ಬೆಳೆದಿದ್ದ ಆ ಮೀನು ನಾವೆಯನ್ನೂ, ಮನುವನ್ನೂ ಸಂರಕ್ಷಿಸಿತು. ಒಬ್ಬಂಟಿಯಾಗಿದ್ದ ಮನುವನ್ನು ಸಂತೈಸಿ, ಪುನಃ ಸೃಷ್ಟಿಕಾರ್ಯವನ್ನು ಪ್ರಾರಂಭಿಸುವಂತೆ ಆಶೀವ೯ದಿಸಿತು.
ಮತ್ಸ್ಯ ಪುರಾಣದಲ್ಲಿ, ಆ ತಿಮಿಂಗಿಲವು ದಾನವ ಹಯಗ್ರೀವನಿಂದ ವೇದಗಳನ್ನು ರಕ್ಷಿಸಿತು. ಇದಾದ ನಂತರ ರಾಜ ಸತ್ಯವ್ರತನನ್ನು ಕಂಡು, ಮನುವಿನ ಕಥೆಯಂತೆಯೇ ಪುನಃ ಸೃಷ್ಟಿಕಾರ್ಯವನ್ನು ಪ್ರಾರಂಭಿಸುವಂತೆ ಹೇಳಿತು. ಬೇಟ್ ದ್ವಾರಕಾದ ಬಳಿ ಅಪರೂಪವಾದ ಮತ್ಸ್ಯ ದೇವಾಲಯವಿದೆ. ಈ ದೇವಾಲಯವು ಯಾದವ ಕುಲವನ್ನೇ ಅಳಿಸಿಹಾಕಿದ ಪ್ರಳಯವನ್ನು ಕಂಡಿದೆ. ನೋವಾನ ಕಥೆಯಲ್ಲಿ ನಮ್ಮ ಪುರಾಣಗಳ ಕಥೆಗಿಂತ ಭಿನ್ನವಾಗಿ, ಪ್ರಾಣಿಗಳೂ ನಾವೆಯಲ್ಲಿ ಸುರಕ್ಷಿತವಾದವು ಎಂದು ಚಿತ್ರಿತವಾಗಿದೆ. ಈ ಮಹಾಪ್ರಳಯದ ಕಥೆಯನ್ನುಎಲ್ಲ ಪುರಾತನ ನಾಗರಿಕತೆಯಲ್ಲಿಯೂ ಕಾಣಬಹುದು. ಇದು ಬಹುಶಃ ಯಾವುದೋ ಹಳೆಯ ವಿಪತ್ತಿನ ಸ್ಮೃತಿಯೂ ಇರಬಹುದು. ಈ ಕಥೆಯು ಮೊಟ್ಟಮೊದಲಿಗೆ ಬಾಬಿಲೋನಿಯಾದಲ್ಲಿ ದೊರೆತ ಆವೆಮಣ್ಣಿನ ಅಚ್ಚುಗಳಲ್ಲಿ ಮತ್ತು ಸಾಮಾನ್ಯ ಪೂವ೯ ಶಕೆ ೩ ರನೆಯ ಕಾಲಘಟ್ಟದಲ್ಲಿ,ಮೆಸೆಪೊಟೋಮಿಯಾದಲ್ಲಿ ಗಿಲ್ಗಮೆಶ್ ನು ಬರೆದ ಗ್ರಂಥದಲ್ಲಿ ಕಾಣಸಿಕ್ಕಿತು.
ಚಿತ್ರ: ತಿರುಪತಿ ಬಳಿಯ ವೇದನಾರಾಯಣ ಸ್ವಾಮಿಯ ದೇವಾಲಯ, ಆಂಧ್ರ ಪ್ರದೇಶ; ಮತ್ಸ್ಯ ನಾರಾಯಣನಾಗಿ ವಿಷ್ಣು ಗೋಚರಿಸುತ್ತಿರುವುದು.