443

ಆದಿಕವಿಯ ನಂತರ ಆದಿಕಾವ್ಯ

ಪರಿಚಯ: ನಾವೆಲ್ಲರೂ ರಾಮಾಯಣವನ್ನು ಸ್ವತಃ ಓದುವ ಮೊದಲು ಕೇಳಿದೆವು. ಹಾಗಾಗಿ ಹಲವಾರು ಪ್ರಕಾರಗಳ ರಾಮಾಯಣಗಳನ್ನೂ, ನುಡಿಗಟ್ಟುಗಳನ್ನೂ ಕೇಳಿರುವುದು ನಮ್ಮೆಲ್ಲರ ಅನುಭವ. ಹೀಗೆ ಕೇಳಿರುವ ಕಥೆಯ ಕೆಲವು ಭಾಗಗಳು ಮೂಲದ ವಾಲ್ಮೀಕಿ ರಾಮಾಯಣದಲ್ಲಿ ಕಾಣಸಿಗುವುದಿಲ್ಲ. ಆದಿಕವಿಗಳ ನಂತರದ ಕವಿಗಳು ಅವುಗಳನ್ನು ಸೇರಿಸಿದ್ದಾರೆ. ಮೂಲ ಕಥಾನಕದ ಭಾವಕ್ಕೆ ಇಂಬು ಕೊಡುವ ಈ ಭಾಗಗಳು ಆ ಮೂಲದ ಕಥೆಯನ್ನು ಇನ್ನಷ್ಟು ಶ್ರೀಮಂತಗೊಳಿಸಿವೆ. ಹಾಗಾಗಿ ಜನಮಾನಸದ ನೆನಪಿನಂಗಳದಲ್ಲಿಯೂ ಅಚ್ಚಳಿಯದೇ ನಿಂತಿವೆ. ಇಂತಹ ರೋಚಕವಾದರೂ ಪ್ರಕ್ಷಿಪ್ತವಾದ ಘಟನಾವಳಿಗಳನ್ನು ಶ್ರೀ ಅರ್ಜುನ್ ಭಾರದ್ವಾಜ್ ಅವರು ಬರೆದಿರುವ ‘The Essential Ramayana’ ಪುಸ್ತಕವು ನಮಗೆ ಸಂಗ್ರಹ ಮಾಡಿ ಕೊಡುತ್ತದೆ. ಈ ರಸಪ್ರಶ್ನೆಯಲ್ಲಿ ಅಂತಹ ೧೨ ಲೋಕಪ್ರಚುರವಾದ ಘಟನೆಗಳನ್ನು ಆಯ್ದು ಪ್ರಶ್ನೆಗಳಾಗಿ ತಂದಿದ್ದೇವೆ. ವಿಜಯಿಗಳಲ್ಲಿ ಐವರು ಶ್ರೀ ಅರ್ಜುನ್ ಭಾರದ್ವಾಜ್ ಅವರ ಪುಸ್ತಕವನ್ನು ಗೆಲ್ಲುವರು. ನಿಮ್ಮನ್ನು ಹಲವು ಕ್ಷಣಗಳು ರಾಮಾಯಣ ಲೋಕದಲ್ಲಿ ವಿಹರಿಸುವಂತೆ ಮಾಡುತ್ತೇವೆ. ಬನ್ನಿ ಹೋಗೋಣ!

ದೇವೇಂದ್ರನಿಗೆ ಮನಸೋತ ಅಹಲ್ಯೆಯು ಶಾಪಗ್ರಸ್ತಳಾದಳು. ರಾಮಲಕ್ಶ್ಮಣರ ಸಮಾಗಮದಿಂದಾಗಿ ಅವಳ ಶಾಪ ವಿಮೋಚನೆಯಾಯಿತು. ಆ ಸಮಯದಲ್ಲಿ ಅವಳು ಯಾವ ರೂಪದಲ್ಲಿದ್ದಳು?

ವಾಲ್ಮೀಕಿ ರಾಮಾಯಣದ ಕಥೆಯಲ್ಲಿರುವಂತೆ ಸೀತಾಕಲ್ಯಾಣದ ಸಮಯದಲ್ಲಿ ಇಲ್ಲಿನ ಯಾವ ಪ್ರಸಂಗವು ನಡೆಯಲಿಲ್ಲ?

ರಾಮನನ್ನು ಕಂಡು ಮೋಹದಲ್ಲಿ ಬಿದ್ದ ಶೂರ್ಪನಖಿಯು ತನ್ನನ್ನು ಸ್ವೀಕರಿಸುವಂತೆ ಅಂಗಲಾಚಿದಳು. ಆಗ ಅವಳು ಯಾವ ರೂಪದಲ್ಲಿದ್ದಳು?

ಸೀತಾಪಹರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಯಾವ ವರ್ಣನೆಗಳು ವಾಲ್ಮೀಕಿ ರಾಮಾಯಣದಲ್ಲಿ ಇಲ್ಲ?

ಸೀತೆಯನ್ನು ಅಪಹರಿಸಿದ ರಾವಣನ ರಥವನ್ನು ಎಳೆದ ಪ್ರಾಣಿಗಳು ಯಾವುವು?

ರಾಮ-ಲಕ್ಷ್ಮಣರ ಶಬರಿಯ ಸಂದರ್ಶನಕ್ಕೆ ಸಂಬಂಧಿಸಿದಂತೆ ಈ ಯಾವ ಘಟನೆಗಳು ವಾಲ್ಮೀಕಿ ರಾಮಾಯಣದ ಭಾಗವಲ್ಲ?

ವಾಲ್ಮೀಕಿ ರಾಮಾಯಣದಲ್ಲಿ ಹನುಮಂತನು ಲಂಕೆಯಲ್ಲಿ ಇಲ್ಲಿನ ಯಾವ ಕಾರ್ಯವನ್ನು ಮಾಡಲಿಲ್ಲ?

ಈ ಯಾವ ಘಟನೆಗಳು ವಾಲ್ಮೀಕಿ ರಾಮಾಯಣದ ಭಾಗವಾಗಿಲ್ಲ?

ಇವುಗಳಲ್ಲಿನ ಯಾವ ಹೆಸರನ್ನು ಮೂಲ ವಾಲ್ಮೀಕಿ ರಾಮಾಯಣದಲ್ಲಿ ಉಪಯೋಗಿಸಿಲ್ಲ?

ಶ್ರವಣ ಕುಮಾರನ ಹೆಸರು ವಾಲ್ಮೀಕಿ ರಾಮಾಯಣದಲ್ಲಿ ಕಾಣುವುದಿಲ್ಲ. ಆದರೆ ಅವನ ಕಥೆಯು ಬಿತ್ತರಿಸಲ್ಪಡುತ್ತದೆ. ಶ್ರವಣ ಕುಮಾರನು ಯಾರು?

ಸೀತೆಯ ಈ ಯಾವ ಆಭೂಷಣಗಳನ್ನು ಲಕ್ಷ್ಮಣನು ಗುರುತಿಸಿದನು?

ಜನಪ್ರಿಯವಾಗಿರುವ ರಾಮಾಯಣದ ಉತ್ತರಕಾಂಡದಲ್ಲಿ ಸೀತೆಯ ಚಾರಿತ್ರ್ಯವನ್ನು ಯಾರು ಸಂದೇಹಿಸುತ್ತಾರೆ?

ನಿರ್ಗಮನ

How did you like this quiz?

Get quiz links

We will send you quiz links at 6 AM on festival days. Nothing else 

Opt In

× Notify Me