ಪಾಳೆಯಗಾರರು ಎಂದರೆ ದಕ್ಷಿಣ ಭಾರತದ ರಾಜರು ಮತ್ತು ನವಾಬರ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸ್ಥಳೀಯ ಸಾಮಂತರು ಅಥವಾ ಮಾಂಡಲಿಕ ಆಡಳಿತಗಾರರು ಆಗಿದ್ದರು.
ತಮಿಳಿನಲ್ಲಿ ಪಳೈಕ್ಕಾರನ್, ತೆಲುಗಿನಲ್ಲಿ ಪಾಲೇಗಾಡು, ಕನ್ನಡದಲ್ಲಿ ಪಾಳೆಯಗಾರ ಹಾಗೂ ಮರಾಠಿಯಲ್ಲಿ ಪಾಲೇಗಾರ್ ಎಂಬ ಹೆಸರುಗಳಿಂದ ಇವರನ್ನು ಕರೆಯಲಾಗುತ್ತಿತ್ತು. ಇವರು ರಾಜರು ಮತ್ತು ನವಾಬರ ಪರವಾಗಿ ದುರ್ಗಮ ಪ್ರದೇಶಗಳ ಆಡಳಿತ, ಭದ್ರತೆ ಮತ್ತು ತೆರಿಗೆ ಸಂಗ್ರಹಣೆಯ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದರು.
ಬ್ರಿಟಿಷರು ದಕ್ಷಿಣ ಭಾರತದ ರಾಜ್ಯಗಳನ್ನು ತಮ್ಮ ಅಧೀನಕ್ಕೆ ತಂದ ನಂತರ, ಪಾಳೆಯಗಾರರ ಅಧಿಕಾರ ಮತ್ತು ಸಾಂಪ್ರದಾಯಿಕ ಹಕ್ಕುಗಳನ್ನು ಮೊಟಕುಗೊಳಿಸಲು ಆರಂಭಿಸಿದರು. ಅವರ ಮೇಲೆ ಅತಿಯಾದ ತೆರಿಗೆಗಳನ್ನು ವಿಧಿಸಿದರು. ಜೊತೆಗೆ ಕೆಲವು ಪ್ರದೇಶಗಳಲ್ಲಿ ಬಲವಂತದ ಕಡ್ಡಾಯ ಸೈನಿಕ ನೇಮಕಾತಿ, ಮತಾಂತರದ ಪ್ರಯತ್ನಗಳು ಮತ್ತು ಧಾರ್ಮಿಕ ಆಚರಣೆಗಳ ಮೇಲಿನ ನಿರ್ಬಂಧಗಳು ಸಹ ಅಸಮಾಧಾನಕ್ಕೆ ಕಾರಣವಾದವು.
ಆ ಕಾಲದಲ್ಲಿ ಸುಮಾರು 80 ಪಾಳೆಯಗಾರರು ಇದ್ದರು ಮತ್ತು ಅವರ ಅಧೀನದಲ್ಲಿ ಸುಮಾರು 30,000 ಯೋಧರು ಇದ್ದರು. 1790ರ ದಶಕದಲ್ಲಿ ತಮಿಳುನಾಡಿನ ಪಾಳೆಯಗಾರರು ಮೊದಲು ಬ್ರಿಟಿಷರ ವಿರುದ್ಧ ಬಂಡಾಯ ಎದ್ದರು. ನಂತರ 1800ರಲ್ಲಿ ಮಲಬಾರ್ ಮತ್ತು ದಿಂಡಿಗಲ್, 1801–1805ರ ಅವಧಿಯಲ್ಲಿ ಆಂಧ್ರ ಪ್ರದೇಶ, ಹಾಗೂ ಮತ್ತೆ 1846ರಲ್ಲಿ ವಿವಿಧ ಪ್ರದೇಶಗಳಲ್ಲಿ ಹೋರಾಟಗಳು ನಡೆದವು.ವೀರಪಾಂಡಿಯ ಕಟ್ಟಬೊಮ್ಮನ್ ಹಾಗೂ ಮರುದು ಪಾಂಡಿಯರ್ ಸಹೋದರರು ತಮಿಳುನಾಡಿನ ಅತ್ಯಂತ ಪ್ರಸಿದ್ಧ ಪಾಳೆಯಗಾರ ನಾಯಕರಾಗಿದ್ದರು .
ಪ್ರಸಿದ್ಧ ನಟ ಶಿವಾಜಿ ಗಣೇಶನ್ ಅವರು 1959ರಲ್ಲಿ ಬಿಡುಗಡೆಯಾದ, “ವೀರಪಾಂಡಿಯ ಕಟ್ಟಬೊಮ್ಮನ್” ಎಂಬ ಅಂತರರಾಷ್ಟ್ರೀಯ ಖ್ಯಾತಿ ಪಡೆದ ತಮಿಳು ಚಿತ್ರದಲ್ಲಿ ಕಟ್ಟಬೊಮ್ಮನ್ ಪಾತ್ರವನ್ನು ನಿರ್ವಹಿಸಿದ್ದರು.
ಚಿತ್ರ: IMDb ವೆಬ್ಸೈಟ್ನಲ್ಲಿರುವ ವೀರಪಾಂಡಿಯ ಕಟ್ಟಬೊಮ್ಮನ್ ಚಿತ್ರದ ಬಣ್ಣದ ಪೋಸ್ಟರ್.
ಮೂಲಗಳು: J. C. Dua ಹಾಗೂ JStorನಲ್ಲಿ ಪ್ರಕಟವಾದ ಪಾಳೆಯಗಾರರ ಕುರಿತ ವಿವಿಧ ಸಂಶೋಧನಾ ಲೇಖನಗಳು.
ಪಾಳೆಯಗಾರರು ಎಂದರೆ ದಕ್ಷಿಣ ಭಾರತದ ರಾಜರು ಮತ್ತು ನವಾಬರ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸ್ಥಳೀಯ ಸಾಮಂತರು ಅಥವಾ ಮಾಂಡಲಿಕ ಆಡಳಿತಗಾರರು ಆಗಿದ್ದರು.
ತಮಿಳಿನಲ್ಲಿ ಪಳೈಕ್ಕಾರನ್, ತೆಲುಗಿನಲ್ಲಿ ಪಾಲೇಗಾಡು, ಕನ್ನಡದಲ್ಲಿ ಪಾಳೆಯಗಾರ ಹಾಗೂ ಮರಾಠಿಯಲ್ಲಿ ಪಾಲೇಗಾರ್ ಎಂಬ ಹೆಸರುಗಳಿಂದ ಇವರನ್ನು ಕರೆಯಲಾಗುತ್ತಿತ್ತು. ಇವರು ರಾಜರು ಮತ್ತು ನವಾಬರ ಪರವಾಗಿ ದುರ್ಗಮ ಪ್ರದೇಶಗಳ ಆಡಳಿತ, ಭದ್ರತೆ ಮತ್ತು ತೆರಿಗೆ ಸಂಗ್ರಹಣೆಯ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದರು.
ಬ್ರಿಟಿಷರು ದಕ್ಷಿಣ ಭಾರತದ ರಾಜ್ಯಗಳನ್ನು ತಮ್ಮ ಅಧೀನಕ್ಕೆ ತಂದ ನಂತರ, ಪಾಳೆಯಗಾರರ ಅಧಿಕಾರ ಮತ್ತು ಸಾಂಪ್ರದಾಯಿಕ ಹಕ್ಕುಗಳನ್ನು ಮೊಟಕುಗೊಳಿಸಲು ಆರಂಭಿಸಿದರು. ಅವರ ಮೇಲೆ ಅತಿಯಾದ ತೆರಿಗೆಗಳನ್ನು ವಿಧಿಸಿದರು. ಜೊತೆಗೆ ಕೆಲವು ಪ್ರದೇಶಗಳಲ್ಲಿ ಬಲವಂತದ ಕಡ್ಡಾಯ ಸೈನಿಕ ನೇಮಕಾತಿ, ಮತಾಂತರದ ಪ್ರಯತ್ನಗಳು ಮತ್ತು ಧಾರ್ಮಿಕ ಆಚರಣೆಗಳ ಮೇಲಿನ ನಿರ್ಬಂಧಗಳು ಸಹ ಅಸಮಾಧಾನಕ್ಕೆ ಕಾರಣವಾದವು.
ಆ ಕಾಲದಲ್ಲಿ ಸುಮಾರು 80 ಪಾಳೆಯಗಾರರು ಇದ್ದರು ಮತ್ತು ಅವರ ಅಧೀನದಲ್ಲಿ ಸುಮಾರು 30,000 ಯೋಧರು ಇದ್ದರು. 1790ರ ದಶಕದಲ್ಲಿ ತಮಿಳುನಾಡಿನ ಪಾಳೆಯಗಾರರು ಮೊದಲು ಬ್ರಿಟಿಷರ ವಿರುದ್ಧ ಬಂಡಾಯ ಎದ್ದರು. ನಂತರ 1800ರಲ್ಲಿ ಮಲಬಾರ್ ಮತ್ತು ದಿಂಡಿಗಲ್, 1801–1805ರ ಅವಧಿಯಲ್ಲಿ ಆಂಧ್ರ ಪ್ರದೇಶ, ಹಾಗೂ ಮತ್ತೆ 1846ರಲ್ಲಿ ವಿವಿಧ ಪ್ರದೇಶಗಳಲ್ಲಿ ಹೋರಾಟಗಳು ನಡೆದವು.ವೀರಪಾಂಡಿಯ ಕಟ್ಟಬೊಮ್ಮನ್ ಹಾಗೂ ಮರುದು ಪಾಂಡಿಯರ್ ಸಹೋದರರು ತಮಿಳುನಾಡಿನ ಅತ್ಯಂತ ಪ್ರಸಿದ್ಧ ಪಾಳೆಯಗಾರ ನಾಯಕರಾಗಿದ್ದರು .
ಪ್ರಸಿದ್ಧ ನಟ ಶಿವಾಜಿ ಗಣೇಶನ್ ಅವರು 1959ರಲ್ಲಿ ಬಿಡುಗಡೆಯಾದ, “ವೀರಪಾಂಡಿಯ ಕಟ್ಟಬೊಮ್ಮನ್” ಎಂಬ ಅಂತರರಾಷ್ಟ್ರೀಯ ಖ್ಯಾತಿ ಪಡೆದ ತಮಿಳು ಚಿತ್ರದಲ್ಲಿ ಕಟ್ಟಬೊಮ್ಮನ್ ಪಾತ್ರವನ್ನು ನಿರ್ವಹಿಸಿದ್ದರು.
ಚಿತ್ರ: IMDb ವೆಬ್ಸೈಟ್ನಲ್ಲಿರುವ ವೀರಪಾಂಡಿಯ ಕಟ್ಟಬೊಮ್ಮನ್ ಚಿತ್ರದ ಬಣ್ಣದ ಪೋಸ್ಟರ್.
ಮೂಲಗಳು: J. C. Dua ಹಾಗೂ JStorನಲ್ಲಿ ಪ್ರಕಟವಾದ ಪಾಳೆಯಗಾರರ ಕುರಿತ ವಿವಿಧ ಸಂಶೋಧನಾ ಲೇಖನಗಳು.