105

ಸ್ವಾತಂತ್ರ್ಯ ದಿನಾಚರಣೆಯ ರಸಪ್ರಶ್ನೆ

ಬ್ರಿಟಿಷ್ ಆಳ್ವಿಕೆಯ ಕುರಿತು ಎರಡು ಪ್ರಮುಖ ತಪ್ಪು ಕಲ್ಪನೆಗಳು ಇವೆ.

ಮೊದಲನೆಯದು: ಬ್ರಿಟಿಷರು ಮೊಘಲರಿಂದ ಭಾರತವನ್ನು ವಶಪಡಿಸಿಕೊಂಡರು ಎಂಬುದು.
ಇದು ತಪ್ಪು. ಅವರು ಮುಖ್ಯವಾಗಿ ಮರಾಠರು ಹಾಗೂ ಭಾರತದಲ್ಲಿದ್ದ ಇತರ ಯುರೋಪಿಯನ್ ಶಕ್ತಿಗಳ ವಿರುದ್ಧ ಹೋರಾಡಿ ತಮ್ಮ ಪ್ರಭುತ್ವವನ್ನು ಸ್ಥಾಪಿಸಿದರು.

ಎರಡನೆಯದು: 1857ರ ಸಿಪಾಯಿ ದಂಗೆಯೇ ಭಾರತದ ಮೊದಲ ಸ್ವಾತಂತ್ರ್ಯ ಸಮರ ಎಂಬುದು.
ಇದೂ ತಪ್ಪು. ಅದಕ್ಕೂ ಮುಂಚೆಯೇ ಭಾರತದ ವಿವಿಧ ಭಾಗಗಳಲ್ಲಿ ಅನೇಕ ಸ್ವಾತಂತ್ರ್ಯ ಹೋರಾಟಗಳು ಮತ್ತು ದಂಗೆಗಳು ನಡೆದಿದ್ದವು.

ಈ ರಸಪ್ರಶ್ನೆಯಲ್ಲಿ 1857ರ ದಂಗೆಗೂ ಮುಂಚೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕ್ರಾಂತಿಕಾರರು ಹಾಗೂ ಬಂಡಾಯಗಳನ್ನು ಪರಿಚಯಿಸಲಾಗುತ್ತದೆ.

ಐದು ಅದೃಷ್ಟಶಾಲಿ ವಿಜೇತರಿಗೆ ಸಂಜೀವ್ ಸನ್ಯಾಲ್ ಅವರ “Revolutionaries” ಪುಸ್ತಕ ಬಹುಮಾನವಾಗಿ ನೀಡಲಾಗುವುದು.

1. ವಂದೇ ಮಾತರಂ” ಗೀತೆಯನ್ನು ರಚಿಸಿದ ಲೇಖಕರು, ಬಂಗಾಳದ ಸನ್ಯಾಸಿ ದಂಗೆಯನ್ನು ತಮ್ಮ ಕಾದಂಬರಿಗಳ ಮೂಲಕ ಅಮರಗೊಳಿಸಿದರು. ಅವರು ಯಾರು?

2. ಭಾರತದ ಮೊದಲ ಸಿಪಾಯಿ ದಂಗೆ 1857ರಲ್ಲಿ ಅಲ್ಲ,1806ರಲ್ಲೇ ನಡೆದಿತ್ತು. ಅದು ಎಲ್ಲಿ ನಡೆಯಿತು?

3. ಪಾಳೆಯಗಾರರು (Poligars / Palayakkarars) ರಾಜರು ಹಾಗೂ ನವಾಬರ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸ್ಥಳೀಯ ಸಾಮಂತ/ಮಾಂಡಲಿಕ ಆಡಳಿತಗಾರರಾಗಿದ್ದರು. ಇವರು 1790ರ ದಶಕದಿಂದ ಬ್ರಿಟಿಷರ ವಿರುದ್ಧ ಬಂಡಾಯ ಎದ್ದರು. ಅದರ ಪ್ರಮುಖ ಕಾರಣವೇನು?

4. 1817–1826ರ ಅವಧಿಯಲ್ಲಿ ಖುರ್ಡಾ ಪ್ರದೇಶದಲ್ಲಿ ಪೈಕ – ರೈತಯೋಧರ ಪಡೆ, ಬ್ರಿಟಿಷರ ವಿರುದ್ಧ ಬಂಡಾಯ ಎದ್ದಿತು. ಈ ಖುರ್ಡಾ ಯಾವ ಕರಾವಳಿ ರಾಜ್ಯದಲ್ಲಿದೆ?

5. ವೇಲು ತಂಪಿ ಅವರು ತಿರುವಾಂಕೂರಿನ ದಳವಾಯಿ (ಪ್ರಧಾನಮಂತ್ರಿ) ಆಗಿದ್ದರು. ವೆಲ್ಲೆಸ್ಲಿ ಜಾರಿಗೆ ತಂದ ಪ್ರಸಿದ್ಧ “ಸಹಾಯಕ ಸೈನ್ಯ ಒಪ್ಪಂದ” ವ್ಯವಸ್ಥೆಯ ವಿರುದ್ಧ ಅವರು 1808–09ರಲ್ಲಿ ಬಂಡಾಯ ಎದ್ದರು. ತಿರುವಾಂಕೂರು ಪ್ರದೇಶವು ಈಗಿನ ಯಾವ ರಾಜ್ಯದಲ್ಲಿದೆ?

6. ಕಿತ್ತೂರು ರಾಣಿ ಚೆನ್ನಮ್ಮ ಅವರು ರಾಣಿ ಲಕ್ಷ್ಮೀಬಾಯಿ ಹೋರಾಡಿದ ಅದೇ ವಿಷಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದರು. ಆ ಹೋರಾಟ ಯಾವುದಕ್ಕಾಗಿ ನಡೆಯಿತು ?

7. 600 ವರ್ಷಗಳಿಗೂ ಹೆಚ್ಚು ಕಾಲ ಆಳಿದ ಅಸ್ಸಾಂನ ಒಂದು ರಾಜವಂಶವು 1828–30ರಲ್ಲಿ ಬ್ರಿಟಿಷರ ವಿರುದ್ಧ ಬಂಡಾಯ ಎದ್ದಿತು. ಅದು ಯಾವ ರಾಜವಂಶ?

8. 1855–56ರ “ಸಂತಾಲ್ ಹುಲ್” ಬಂಡಾಯದ ಪರಿಣಾಮವಾಗಿ ಬ್ರಿಟಿಷರು ಸಂತಾಲ್ ಪರಗಣಾ ಜಿಲ್ಲೆಯನ್ನು ರಚಿಸಿದರು. ಈ ಜಿಲ್ಲೆ ಈಗ ಯಾವ ರಾಜ್ಯದಲ್ಲಿದೆ?

9. ಬ್ರಿಟಿಷರ ವಿರುದ್ಧ ಹೋರಾಡಿದ ಮಹಾನ್ ಆದಿವಾಸಿ ಕ್ರಾಂತಿಕಾರಿ ಬಿರ್ಸಾ ಮುಂಡಾ ಅವರ ಹೆಸರನ್ನು ಇಡಲಾಗಿರುವ “ಬಿರ್ಸಾ ಮುಂಡಾ ವಿಮಾನ ನಿಲ್ದಾಣ” ಎಲ್ಲಿದೆ?

10. ಬ್ರಿಟಿಷರು ಬಂಗಾಳದ ರೈತರನ್ನು ಆಹಾರ ಧಾನ್ಯಗಳ ಬದಲು ಒಂದು ವಾಣಿಜ್ಯ ಬೆಳೆಯನ್ನು ಬೆಳೆಯಬೇಕೆಂದು ಒತ್ತಾಯಿಸಿದರು. ಇದರಿಂದ 1859–60ರಲ್ಲಿ ಬಂಗಾಳದಲ್ಲಿ “ನೀಲ್ ಬಿದ್ರೋಹ್ ” ಎಂಬ ಪ್ರಮುಖ ರೈತ ಬಂಡಾಯ ನಡೆಯಿತು. ಇದೇ ಸಮಸ್ಯೆ 1917ರಲ್ಲಿ ಚಂಪಾರಣದಲ್ಲಿಯೂ ಕಾಣಿಸಿಕೊಂಡಿತು. ಆ ಬೆಳೆ ಯಾವುದು?

11. “ರಾಮ ದಂಡು” ಎಂದರೆ ಏನು? 1919ರಲ್ಲಿ ಆಂಧ್ರ ಪ್ರದೇಶದ ಎರಡು ಗ್ರಾಮಗಳು ನಡೆಸಿದ ತೆರಿಗೆ ಪಾವತಿಸದ ಚಳುವಳಿಗೆ ಈ ಹೆಸರಿನ ಸಂಘಟನೆಯೇ ನಾಯಕತ್ವ ನೀಡಿತ್ತು.

12. 1920 ಮತ್ತು 30ರ ದಶಕಗಳಲ್ಲಿ ಆಂಧ್ರ ಮತ್ತು ತೆಲಂಗಾಣ ಪ್ರದೇಶಗಳಲ್ಲಿ ನಡೆದ ಆದಿವಾಸಿ ಬಂಡಾಯಗಳನ್ನು ಆಧರಿಸಿದ ಇತ್ತೀಚಿನ ಯಾವ ಚಿತ್ರ ಪ್ರಸಿದ್ಧವಾಗಿದೆ?

ನಿರ್ಗಮನ

How did you like this quiz?

Get quiz links

We will send you quiz links at 6 AM on festival days. Nothing else 

Opt In