100

ಟಾಗೋರ ಜಯಂತಿ

ಇಂದು ಮೇ 9 ಟ್ಯಾಗೋರ್ ಅವರ ಜಯಂತಿ. ಟ್ಯಾಗೋರ್ ರವರು ಜಾಗತಿಕ ಪ್ರಸಿದ್ಧಿಯನ್ನು ಹೊಂದಿದ್ದ ಭಾರತದ ಅತ್ಯಂತ ಪ್ರತಿಷ್ಠಿತ ಕವಿ. ಅವರಂತೆಯೇ ಹೆಸರಾಗಿದ್ದ ಅನೇಕ ಕವಿಗಳು ಭಾರತದ ನವ್ಯ ಭಾಷೆಗಳಲ್ಲಿ ಕಾವ್ಯರಚನೆ ಮಾಡಿದ್ದಾರೆ. ಅವರ ಕಾವ್ಯಗಳು ನಮ್ಮ ಧರ್ಮ ನಿಷ್ಠೆ, ಭಕ್ತಿ, ಸಮಾಜ ಸುಧಾರಣೆ ಹಾಗೂ ಸ್ವಾತಂತ್ರ್ಯ ಹೋರಾಟಕ್ಕೆ ಒಂದು ದಾರಿಯನ್ನು ಹಾಕಿಕೊಟ್ಟಿದ್ದವು. ಈ ಕವಿಗಳು ತಮ್ಮ ಕೃತಿಗಳ ಮೂಲಕ ಭಾಷೆಗಳ ಅಭಿವೃದ್ಧಿಗೂ ಕಾರಣಿಭೂತರಾದರು. ಈ ಪ್ರಶ್ನಾವಳಿ ನಿಮ್ಮನ್ನು 10ನೇ ಶತಮಾನದ ನಂತರದ 12 ಕವಿಗಳ ಬಳಿ ಕೊಂಡೊಯ್ಯುತ್ತವೆ.

ನರಸಿಂಹ ಮೆಹತಾ ಗುಜರಾತಿನ ಒಬ್ಬ ಪ್ರತಿಷ್ಠಿತ ಕವಿ. ಅವರ ಯಾವ ಕವಿತೆಯನ್ನು ಗಾಂಧೀಜಿಯವರು ಅಮರಗೊಳಿಸಿದ್ದಾರೆ?

ಭಾರತದ ಅತಿ ದೊಡ್ಡ ಶಾಸ್ತ್ರೀಯ ಸಂಗೀತದ ಸಾಮೂಹಿಕ ಗಾಯನೋತ್ಸವ ತಮಿಳುನಾಡಿನಲ್ಲಿ ಪ್ರತಿವರ್ಷವೂ ನಡೆಯುತ್ತದೆ. ಇದನ್ನು ಯಾವ ತೆಲುಗು ಸಂಗೀತಗಾರನ ಹೆಸರಿನಲ್ಲಿ ಆಚರಿಸಲಾಗುತ್ತದೆ?

ಅತ್ಯಂತ ವೈಭವೊಪೇತವಾದ ಪಂಡರಾಪುರ ಯಾತ್ರೆ ಯ ಪ್ರಾರಂಭದ ಸ್ಥಳ ಪುಣೆಯ ಹತ್ತಿರವಿರುವ ಅಲ್ಲಂಡಿ ಪಟ್ಟಣ. ಯಾವ ಸಂತ ಕವಿಯ ಪಲ್ಲಕ್ಕಿಯನ್ನು ಅಲ್ಲಂಡಿ ಪಟ್ಟಣದಿಂದ ಪಂಡರಾಪುರಕ್ಕೆ ಹೊತ್ತೊಯ್ಯಲಾಗುತ್ತದೆ?

ದಮಾ ಧಂ ಮಸ್ತ್ ಕಲಂದರ್’ ಹಾಡನ್ನು ಯಾವ ಪಂಜಾಬಿ ಕವಿ ಜನಪ್ರಿಯಗೊಳಿಸಿದರು?

ಬಾನು ಸಿಂಹ ಎಂಬ ಕಾವ್ಯನಾಮದಿಂದ ಅತ್ಯುನ್ನತ ಭಕ್ತಿ ಕಾವ್ಯ ರಚಿಸಿದ ಬಂಗಾಳದ ಸಮಾಜ ಸುಧಾರಕ ಮತ್ತು ನವ್ಯಕವಿ ಯಾರು?

ದಕ್ಷಿಣ ಭಾರತದ ಒಂದು ಮುಖ್ಯ ಸಮುದಾಯವು 12ನೇ ಶತಮಾನದ ಸಮಾಜ ಸುಧಾರಕ ಹಾಗೂ ಕವಿಯಾದ ಶ್ರೀ ಬಸವೇಶ್ವರರನ್ನು ತಮ್ಮ ಗುರುಗಳೆಂದು ಪರಿಗಣಿಸುತ್ತಾರೆ. ಈ ಸಮುದಾಯದ ಹೆಸರೇನು?

ಬನಾರಸದ ಮಹಾರಾಜರಿಗೆ ಹಣಹೂಡಿಕೆದಾರ ಕುಟುಂಬದ ಈ ವ್ಯಕ್ತಿ ಹಿಂದಿ ಸಾಹಿತ್ಯದ ಪಿತಾಮಹ ಎನಿಸಿಕೊಂಡರು. ಇವರ ಹೆಸರೇನು?

ವಿದ್ಯಾಪತಿ ಯ ಬರವಣಿಗೆಯ ಶೈಲಿ ಎಷ್ಟು ಪ್ರಸಿದ್ದವಾಯಿತೆಂದರೆ ಅದು ಬ್ರಜಬಾವುಲಿ ಎನ್ನುವ ಒಂದು ವಿಶೇಷ ಸಾಹಿತ್ಯ ಭಾಷೆಯನ್ನು ಹುಟ್ಟು ಹಾಕಿತು. ವಿದ್ಯಾಪತಿ ಪ್ರಾರಂಭದಲ್ಲಿ ಯಾವ ಭಾಷೆಯಲ್ಲಿ ಸಾಹಿತ್ಯ ರಚನೆ ಮಾಡಿದರು?

ಅತಿಬಡಿ ಜಗನ್ನಾಥ ದಾಸರ ಯಾವ ಕೃತಿ ಒಡಿಸ್ಸಾದಲ್ಲಿ ರಾಮಚರಿತ ಮಾನಸದಷ್ಟೇ ಪ್ರತಿಷ್ಥಿತ ಸ್ಥಾನವನ್ನು ಹೊಂದಿದೆ?

ಶ್ರೀಮಂತ ಶಂಕರದೇವ ಸತ್ರ ಎನ್ನುವ ಸಾಧುಸಂತರ ಆಶ್ರಮಗಳನ್ನು ಸ್ಥಾಪಿಸಿ ಹೊಸ ಸಂಪ್ರದಾಯವನ್ನು ಪ್ರಾರಂಭ ಮಾಡಿದರು. ಈ ಆಶ್ರಮಗಳನ್ನು ನಾವು ಎಲ್ಲಿ ಕಾಣಬಹುದು?

ತುಂಚತ್ತು ರಾಮಾನುಜನ್ ಎಝುತಾಚನ್ ಅವರ ರಾಮಾಯಣ ಯಾವ ರೀತಿ ಕೇರಳದಲ್ಲಿ ಇನ್ನೂ ಉಪಯೋಗದಲ್ಲಿದೆ?

ಮಹಾಕವಿ ಭಾರತಿ ಭಕ್ತಿ, ದೇಶಭಕ್ತಿ, ಮತ್ತು ಸಮಾಜಸುಧಾರಣೆ ಇವುಗಳ ಮೇಲೆ ಕವನ ರಚಿಸಿದರು. ಇವರು ಯಾವ ಭಾಷೆಯಲ್ಲಿ ಸಾಹಿತ್ಯ ರಚನೆ ಮಾಡಿದರು?

ನಿರ್ಗಮನ

How did you like this quiz?

Get quiz links

We will send you quiz links at 6 AM on festival days. Nothing else 

Opt In