185

ವ್ಯಾಸ ಮಹಾಭಾರತದ ರಸಪ್ರಶ್ನೆ

ಇಂದು, 29 ಜುಲೈ 2026, ಗುರು ಪೂರ್ಣಿಮೆ.
ಇಂದು ನಾವು ವೇದವ್ಯಾಸರ ಜನ್ಮದಿನವನ್ನು ಆಚರಿಸುತ್ತೇವೆ. ಅವರು ನಮ್ಮ ಶಾಸ್ತ್ರಗಳಿಗೆ ಅಪಾರ ಮತ್ತು ಅಮೂಲ್ಯ ಕೊಡುಗೆಗಳನ್ನು ನೀಡಿದ್ದಾರೆ.ಈ ರಸಪ್ರಶ್ನೆ ನಿಮ್ಮನ್ನು ಮಹಾಭಾರತದ ಪಯಣಕ್ಕೆ ಕರೆದೊಯ್ಯುತ್ತಾ ಅದರ ಉಗಮ, ವಿಶಿಷ್ಟತೆ ಹಾಗೂ ಆಳವಾದ ತತ್ತ್ವಗಳನ್ನು ಪರಿಚಯಿಸುತ್ತದೆ.ಈ ರಸಪ್ರಶ್ನೆಯಲ್ಲಿ ಭಾಗವಹಿಸುವವರಲ್ಲಿ ಅದೃಷ್ಟಶಾಲಿ ಐವರು ಅರ್ಜುನ್ ಭಾರದ್ವಾಜ್ ಅವರ The Essential Mahabharata for the Young ಎಂಬ ಸುಂದರ ಚಿತ್ರಗಳೊಂದಿಗೆ ಅಲಂಕರಿಸಲ್ಪಟ್ಟ, ಪ್ರಾಮಾಣಿಕ ಮಹಾಭಾರತದ ಆವೃತ್ತಿಯನ್ನು ಬಹುಮಾನವಾಗಿ ಗೆಲ್ಲುವ ಅವಕಾಶವನ್ನು ಪಡೆಯುತ್ತಾರೆ.

1. ‘ವ್ಯಾಸ’ ಎಂದರೆ ‘ಮರುಸಂಘಟಿಸುವವರು’ ಅಥವಾ ‘ವ್ಯವಸ್ಥಿತಗೊಳಿಸುವವರು’ ಎಂಬ ಅರ್ಥ.ಹಾಗಾದರೆ, ವ್ಯಾಸರು ಯಾವುದನ್ನು ಮರುಸಂಘಟಿಸಿದರು?

2. ವೇದವ್ಯಾಸರು ಮಹಾನ್ ಗ್ರಂಥಕರ್ತರೂ ಆಗಿದ್ದರು. ಕೆಳಗಿನ ಕೃತಿಗಳಲ್ಲಿ ಯಾವುದು
ವೇದವ್ಯಾಸರ ಕೃತಿಯಲ್ಲ?

3. ಮಹಾಭಾರತದಲ್ಲಿ ವೇದವ್ಯಾಸರ ಪಾತ್ರವೇನು?

4. ಮಹಾಭಾರತವನ್ನು ಬರೆದದ್ದು ವಿನಾಯಕ. ಈ ಕಾರ್ಯಕ್ಕಾಗಿ ವಿನಾಯಕನ ಬಳಿ ಹೋಗಲು ವ್ಯಾಸರಿಗೆ ಸಲಹೆಯನ್ನು ನೀಡಿದವರು ಯಾರು?

5. ಮಹಾಭಾರತವು ವಿಶ್ವದ ಅತಿ ದೊಡ್ಡ ಮಹಾಕಾವ್ಯವಾಗಿದೆ. ಮಹಾಭಾರತದಲ್ಲಿ ಎಷ್ಟು ಶ್ಲೋಕಗಳಿವೆ?

ನೈಮಿಷಾರಣ್ಯವು ಮಹಾಭಾರತವನ್ನು ನಿರೂಪಿಸಿದ ಸ್ಥಳವಾಗಿದೆ. ನೈಮಿಷಾರಣ್ಯ ಎಲ್ಲಿದೆ?

7. ಉಗ್ರಶ್ರವ ಸೌತಿಯು ಮಹಾಭಾರತವನ್ನು ನಿರೂಪಿಸಿದರು . ‘ಸೌತಿ’ ಎಂಬ ಹೆಸರಿನ ಅರ್ಥವೇನು?

8. ಮಹಾಭಾರತದ ಮೊದಲ ಅಧ್ಯಾಯವಾದ ಅನುಕ್ರಮಣಿಕಾದಲ್ಲಿ ಸುಮಾರು 160 ಶ್ಲೋಕಗಳು ಮಹಾಭಾರತದ ಸಾರಾಂಶವನ್ನು ಒಳಗೊಂಡಿವೆ. ಈ ಸಾರಾಂಶವನ್ನು ಮಹಾಭಾರತದ ಯಾವ ಪಾತ್ರವು ನಿರೂಪಿಸುತ್ತದೆ?

9. ಮಹಾಭಾರತದ ನಿರ್ಣಾಯಕ  ಆವೃತ್ತಿ (ಕ್ರಿಟಿಕಲ್ ಎಡಿಷನ್) ಏನು ಮಾಡುತ್ತದೆ?

10. ಮಹಾಭಾರತವನ್ನು ಹಿಂದೂ ಧರ್ಮದ ಮತ್ತೊಂದು ಮಹಾನ್ ಗ್ರಂಥಕ್ಕೆ ಹೋಲಿಸಲಾಗುತ್ತದೆ. ಅದು ಯಾವುದು?

11. ‘ಜಯ’ ಎಂಬುದು ಮಹಾಭಾರತದ ಪ್ರಾಚೀನ ಹೆಸರುಗಳಲ್ಲಿ ಒಂದಾಗಿದೆ. ‘ಜಯ’ ಎಂದರೆ ವಿಜಯ. ಈ ಹೆಸರು ಯಾರ ವಿಜಯವನ್ನು ಸೂಚಿಸುತ್ತದೆ?

ಧರ್ಮವನ್ನು ವಿವರಿಸುವುದು ಏಕೆ ಅಗತ್ಯವಾಗಿದೆ ?

ನಿರ್ಗಮನ

How did you like this quiz?

Get quiz links

We will send you quiz links at 6 AM on festival days. Nothing else 

Opt In