ಹನುಮಂತನ ಕಥೆಗಳ ರಸಪ್ರಶ್ನೆ

ನಮಗೆಲ್ಲಾ ಅತಿ ಪ್ರೀತಿ ಪಾತ್ರನಾದ ದೇವರುಗಳಲ್ಲಿ ಒಬ್ಬ, ಹನುಮಂತ.
ಆಂಜನೇಯನ ಕಥೆಗಳೂ ಸಾವಿರಾರು. ಹನುಮಾನ್ ಜಯಂತಿಯಾದ ಇಂದು, ಅವನ ೧೨ ಜನಪ್ರಿಯ ಕಥೆಗಳನ್ನು ನೆನಪಿಸಿಕೊಳ್ಳೋಣ. ನೈಷ್ಠಿಕ ಬ್ರಹ್ಮಚಾರಿಯಾದ ಇವನಿಗೆ ಮಗನಿರುವನೇ? ಮಹಾಭಾರತದಲ್ಲಿ ಅತಿ ಪರಾಕ್ರಮಿಯಾದ ದೈವಾಂಶ ಸಂಭೂತನಾದ ಇವನ ತಮ್ಮನಾರು?… ಜೈ ಬಜರಂಗ ಬಲಿ!

ಆದಿಕವಿಯ ನಂತರ ಆದಿಕಾವ್ಯ

ಪರಿಚಯ: ನಾವೆಲ್ಲರೂ ರಾಮಾಯಣವನ್ನು ಸ್ವತಃ ಓದುವ ಮೊದಲು ಕೇಳಿದೆವು. ಹಾಗಾಗಿ ಹಲವಾರು ಪ್ರಕಾರಗಳ ರಾಮಾಯಣಗಳನ್ನೂ, ನುಡಿಗಟ್ಟುಗಳನ್ನೂ ಕೇಳಿರುವುದು ನಮ್ಮೆಲ್ಲರ ಅನುಭವ. ಹೀಗೆ ಕೇಳಿರುವ ಕಥೆಯ ಕೆಲವು ಭಾಗಗಳು ಮೂಲದ ವಾಲ್ಮೀಕಿ ರಾಮಾಯಣದಲ್ಲಿ ಕಾಣಸಿಗುವುದಿಲ್ಲ. ಆದಿಕವಿಗಳ ನಂತರದ ಕವಿಗಳು ಅವುಗಳನ್ನು ಸೇರಿಸಿದ್ದಾರೆ. ಮೂಲ ಕಥಾನಕದ ಭಾವಕ್ಕೆ ಇಂಬು ಕೊಡುವ ಈ ಭಾಗಗಳು ಆ ಮೂಲದ ಕಥೆಯನ್ನು ಇನ್ನಷ್ಟು ಶ್ರೀಮಂತಗೊಳಿಸಿವೆ. ಹಾಗಾಗಿ ಜನಮಾನಸದ ನೆನಪಿನಂಗಳದಲ್ಲಿಯೂ ಅಚ್ಚಳಿಯದೇ ನಿಂತಿವೆ. ಇಂತಹ ರೋಚಕವಾದರೂ ಪ್ರಕ್ಷಿಪ್ತವಾದ ಘಟನಾವಳಿಗಳನ್ನು ಶ್ರೀ ಅರ್ಜುನ್ ಭಾರದ್ವಾಜ್ ಅವರು ಬರೆದಿರುವ ‘The essential ramayana’ ಪುಸ್ತಕವು ನಮಗೆ ಸಂಗ್ರಹ ಮಾಡಿ ಕೊಡುತ್ತದೆ. ಈ ರಸಪ್ರಶ್ನೆಯಲ್ಲಿ ಅಂತಹ ೧೨ ಲೋಕಪ್ರಚುರವಾದ ಘಟನೆಗಳನ್ನು ಆಯ್ದು ಪ್ರಶ್ನೆಗಳಾಗಿ ತಂದಿದ್ದೇವೆ. ವಿಜಯಿಗಳಲ್ಲಿ ಐವರು ಶ್ರೀ ಅರ್ಜುನ್ ಭಾರದ್ವಾಜ್ ಅವರ ಪುಸ್ತಕವನ್ನು ಗೆಲ್ಲುವರು. ನಿಮ್ಮನ್ನು ಹಲವು ಕ್ಷಣಗಳು ರಾಮಾಯಣ ಲೋಕದಲ್ಲಿ ವಿಹರಿಸುವಂತೆ ಮಾಡುತ್ತೇವೆ. ಬನ್ನಿ ಹೋಗೋಣ!

ಉಗಾದಿ ಗುಡಿ ಪಾಡ್ಯ ರಸಪ್ರಶ್ನೆ

ಯುಗಾದಿ ಹಾಗೂ ಗುಡಿಪಡ್ವಾ ಪರ್ವಗಳು ದಾಕ್ಷಿಣಾತ್ಯರಲ್ಲಿ ಹೊಸ ವರ್ಷದ ಆರಂಭವನ್ನು ಸೂಚಿಸುತ್ತವೆ. ಮಹಾರಾಷ್ಟ್ರ, ಕರ್ನಾಟಕ, ಆಂಧ್ರ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಹೊಸ ವರ್ಷವನ್ನು ಹೀಗೆ ಆಚರಿಸಲಾಗುತ್ತದೆ. ಈ ರಸಪ್ರಶ್ನೆಯಲ್ಲಿ, ಭಾರತದ ದಕ್ಷಿಣ ಭಾಗಗಳನ್ನು ಆಳಿದ, ಗತಿಸಿದ ಕಾಲದಲ್ಲಿ ನಾವುಗಳು ಮರೆತ ಅತಿ ಪ್ರಭಾವಶಾಲಿ ಅರಸೊತ್ತಿಗೆಗಳ ಬಗ್ಗೆ ತಿಳಿದುಕೊಳ್ಳೋಣ. ದಕ್ಷಿಣವನ್ನು ಆಳಿದ ಅತ್ಯಂತ ಪ್ರಾಚೀನ ರಾಜವಂಶ ಯಾವುದು? ಎಲ್ಲೋರ ಗುಹ್ಯ ದೇವಾಲಯಗಳ ನಿರ್ಮಾತ್ರರು ಯಾರು? ಹಿಂದೂ ದೇವಾಲಯದ ತೂಗುತೊಟ್ಟಿಲು ಎಂದು ಯಾವ ಜಾಗವು ವಿಖ್ಯಾತವಾಗಿದೆ? ಅದರ ಕೀರ್ತಿ ಯಾರಿಗೆ ಸಲ್ಲುತ್ತದೆ? ಈ ವಿಚಾರಗಳನ್ನು ತಿಳಿಯಲು ಉತ್ಸುಕರೇ ? ಬನ್ನಿ….

5 ಅದೃಷ್ಟಶಾಲಿ ರಸಪ್ರಶ್ನೆ ಸ್ಪರ್ಧಿಗಳು ಪುಸ್ತಕವನ್ನು ಗೆಲ್ಲುತ್ತಾರೆ.